ಹಿಂದೂ (Hindu) ಎನ್ನುವುದನ್ನು ಅಶ್ಲೀಲ ಎಂದು ಕರೆದಾಗ ತಕ್ಕ ಉತ್ತರ ಕೊಡಲೇಬೇಕಾಗಿತ್ತು. ನನ್ನ ಧರ್ಮ ಮತ್ತು ತಾಯಿಯ ಬಗ್ಗೆ ಮಾತಾಡಿದವರ ಕ್ಷೇತ್ರಕ್ಕೆ ಹೋಗಬೇಕು ಅನಿಸಿತು ಎಂದು ಚಕ್ರವರ್ತಿ ಸೂಲಿಬೆಲೆ (Chakravarthi sulibele) ಹೇಳಿದ್ದಾರೆ. ಬೆಳಗಾವಿಯ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು ಅದಕ್ಕೆ ಯಮಕನಮರಡಿಗೆ ಬಂದಿದ್ದಿನಿ. ನನ್ನ ವಯಕ್ತಿಕವಾಗಿ ಟೀಕೆ ಮಾಡಿದ್ರೆ ಸುಮ್ಮನಿರ್ತಿನಿ, ಜಾತಿ ಹಿಡಿದು ಟೀಕೆ ಮಾಡಿದ್ರೂ ಸಹ ಸುಮ್ಮನಿರ್ತೀನಿ.
ಆದರೆ ಹಿಂದೂ ಧರ್ಮದ ಕುರಿತು ಮಾತಾಡಿದ್ರೆ ಹೇಗೆ ಸುಮ್ಮನಿರಲ್ಲಿ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸತೀಶ್ ಜಾರಕಿಹೊಳಿಗೆ ಸವಾಲು ಹಾಕಿದ್ದಾರೆ. ಅಂಬೇಡ್ಕರ್ ಹೆಸರನ್ನು ಹಾಕಿಕೊಂಡು ಓಡಾಡೋರಿಗೆ ನಾನು ಪ್ರಶ್ನೆ ಮಾಡ್ತಿನಿ. ಡಿಕ್ಷನರಿ ನೋಡಿಕೊಂಡು ಮಾತಾಡುವ ಪುಣ್ಯಾತ್ಮರಿಗೆ ಯಾವ ಡಿಕ್ಷನರಿ ಅಂತ ಮರೆತು ಹೋಗಿದೆ ಎಂದು ಲೇವಾಡಿ ಮಾಡಿದ್ರು. ಹಿಂದೂ ಸಮಾಜ ತಿರುಗಿಬಿದ್ರೆ ಏನಾಗುತ್ತೆ ಅನ್ನೋದು ಇಂದು ಯಮಕನಮರಡಿಯಲ್ಲಿ ಪ್ರೂವ್ ಆಗಿದೆ. ಇವತ್ತು ಹಿಂದೂ ಸಮಾಜ ಹಲಾಲ್ ವಿಚಾರ ಬಂದಾಗ ಬೀದಿಗೆ ಬಂದು ನಿಲ್ಲುತ್ತೆ. ಹಿಂದೂ ಅಂದ್ರೆ ಅಶ್ಲೀಲನಾ ಎಂದು ಪ್ರಶ್ನಿಸಿದ್ರು. ಹಿಂದೂ ಅಂದ್ರೆ ಬದುಕಿನ ಶೈಲಿ ಅಂತಾ ಸುಪ್ರೀಂಕೋರ್ಟ್ ಹೇಳುತ್ತೆ. ಧರ್ಮ ಬೇರೆ, ರಿಲಿಜನ್ ಬೇರೆ. ನಾನು ಕ್ರಿಶ್ಚಿಯನ್ ರು ಅನೇಕರ ಮತಾಂತರ ಮಾಡೋದನ್ನ ನೋಡಿದೀನಿ. ಹಿಂದೂ ಧರ್ಮ ಯಾರೂ ಯಾರನ್ನೂ ನಂಬಿ ಅಂತ ಹೇಳಲ್ಲ. ನಾನು ಮತಾಂತರ ಗೊಂಡೆ ಎಂದು ಹೇಳುವುದು ರಿಲಿಜಿಯನ್ ನಲ್ಲಿ ಮಾತ್ರ. ಧರ್ಮದಲ್ಲಿ ಅದನ್ನು ಮಾಡಲು ಸಾಧ್ಯವೇ ಇಲ್ಲ ಇದೇ ಬದುಕಿನಶೈಲಿ ಎಂದು ಹೇಳಿದ್ರು.ನಮ್ಮ ಜನರನ್ನು ಮತಾಂತರ ಮಾಡಲು ಬಂದ ಕ್ರಿಶ್ಚಿಯನ್ ರೇ ಮತಾಂತರವಾದರು. ದೇವರಿದ್ದಾನೆ ಎನ್ನುವವ ದೇವರಿಲ್ಲ ಎನ್ನುವ ಇಬ್ಬರೂ ಸಹ ಹಿಂದೂಗಳೇ. ಕೊತ್ವಾಲರು, ಸಾಹುಕಾರರು ಯಾವ ಲೆಕ್ಕ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : – ಜೈಲಿನಿಂದಲೇ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್