ಗಂಧದ ಜೊತೆ ಜಗಳವಾಡಿದರೆ ಗಂಧ ಅಂಟಿಕೊಳ್ಳುತ್ತೆ . ಗಲೀಜು ಜೊತೆ ಜಗಳವಾಡಿದರೆ ಗಲೀಜು ಅಂಟಿಕೊಳ್ಳುತ್ತದೆ ಎಂದು ಮಾಜಿ ಶಾಸಕ ಡಾ. ಎಂ ಸಿ ಸುಧಾಕರ್ (MC.Sudhakar) ವಿರುದ್ಧ ಸಚಿವ ಸುಧಾಕರ್ (Sudhakar) ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಹತ್ತಿರದಲ್ಲೇ ಎಲ್ಲಾ ಬಯಲಿಗೆ ಬರುತ್ತದೆ ವೈಟ್ ಆಂಡ್ ಸೀ . ನಂದೇನೆ ಇದ್ರೂ ಎಲ್ಲ ಎಲೆಕ್ಷನ್ ಕಮಿಷನ್ ಗೆ ಕೊಟ್ಟಿದ್ದೇನೆ . ಅವರತರ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಲ್ಲ ಎಂದು ತಿಳಿಸಿದ್ರು. ಇದೇ ವೇಳೆ ಮಂಕಿಪಾಕ್ಸ್ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ . ರಾಜ್ಯದ ಎಲ್ಲಾ ಗಡಿಗಳಲ್ಲಿ ಬಹಳ ಕಟ್ಟೆಚ್ಚರ ವಹಿಸಿದ್ದೇವೆ .ಅಂತರಾಷ್ಟ್ರೀಯ ಪ್ರಯಾಣಿಕರು ಮಾರ್ಗಸೂಚಿಗಳನ್ನು ಪಾಲಿಸಬೇಕು. ಇದನ್ನು ಓದಿ :- ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ – ಪ್ರಧಾನಿ ನರೇಂದ್ರ ಮೋದಿ
ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾವಹಿಸಿದ್ದಾರೆ .ಬೇರೆ ರಾಜ್ಯಗಳಲ್ಲಿ ರೋಗದ ಲಕ್ಷಣಗಳು ಕಂಡುಬಂದಿದ್ರು. ನಮ್ಮ ರಾಜ್ಯದಲ್ಲಿ ಇನ್ನೂ ಒಂದು ಪ್ರಕರಣ ದಾಖಲಾಗಿಲ್ಲ .ಜ್ವರ , ಚರ್ಮದ ಮೇಲೆ ಗಾಯಗಳಾದ್ರೆ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಇದನ್ನು ಓದಿ :- ಕಾಮನ್ ವೆಲ್ತ್ ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್ ಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ