ಪಿಎಫ್ ಐ (Pfi) ಕಾಂಗ್ರೆಸ್ (Congress) ನ ಪಾಪದ ಕೂಸು ಎಂಬ ಬಿಎಸ್ ಯಡಿಯೂರಪ್ಪ (Yediyurappa) ಹೇಳಿಕೆಗೆ ಮೈಸೂರಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yattindra siddaramaiah) ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ಡಿಪಿಐ, ಪಿಎಫ್ಐ ಎರಡೂ ಬಿಜೆಪಿಯ ಬಿ ಟೀಂ. ಅವರಿಂದಲೇ ಇವರ ಕೋಮುವಾದಿ ಬೇಳೆ ಬೇಯುತ್ತಿದೆ.
ನಿಜವಾಗಲೂ ಅವರಿಗೆ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಬ್ಯಾನ್ ಮಾಡಬೇಕಿತ್ತು. ಚುನಾವಣೆ ಹತ್ತಿರ ಬರ್ತಿದೆ ಅಂತ ಗಿಮಿಕ್ ಮಾಡಿದ್ದಾರೆ. ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು. ಗುಂಡ್ಲುಪೇಟೆಯಲ್ಲಿ ಪ್ಲೆಕ್ಸ್ ಹರಿದಿರುವ ವಿಚಾರವಾಗಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ತಡೆಯಲು ಬಿಜೆಪಿ ಯತ್ನ. ಅದಕ್ಕಾಗಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಜನ ಬೆಂಬಲ ನೋಡಿ ಬಿಜೆಪಿಯವರಿಗೆ ಹೊಟ್ಟೆಉರಿ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಚಾಮರಾಜನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಫ್ಲೆಕ್ಸ್ ಹರಿದ ಕಿಡಿಗೇಡಿಗಳು
ನಾಡಹಬ್ಬ ದಸರೆಯಲ್ಲೂ ಕಮೀಷನ್ ವಿಚಾರ
ದಸರಾದಲ್ಲಿ ಕಮೀಷನ್ ಇದೆ ಎಂಬ ವಿಚಾರ ನನಗೂ ಕೇಳಿಬಂದಿದೆ. ಇದರಿಂದ ಮೈಸೂರಿನ ಮಾನ ಹೋಗಿದೆ. ಈ ಬಾರಿ ಸರ್ಕಾರ ದಸರೆ ಯಶಸ್ವಿ ನಡೆಸಲು ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ. ಈ ಅವ್ಯವಸ್ಥೆಯನ್ನ ಅವರೇ ಹೊರಬೇಕು ಎಂದು ಹೇಳಿದ್ರು.
ಇದನ್ನೂ ಓದಿ : – ಕಾನೂನು ಪ್ರಕಾರ ಗರ್ಭಪಾತಕ್ಕೆ ಎಲ್ಲಾ ಮಹಿಳೆಯರು ಅರ್ಹರು – ಸುಪ್ರೀಂಕೋರ್ಟ್ ಮಹತ್ವದ ಆದೇಶ