ಬೆಳಗಾವಿ ( BELGAVI ) ಗಡಿ ವಿವಾದ ಕುರಿತಂತೆ ಕುಮಾರಸ್ವಾಮಿ (H.D KUMARSWAMY ) ಹೇಳಿಕೆಗೆ ಸಚಿವ ಆರ್. ಅಶೋಕ್ ( R. ASHOK ) ಚಿಕ್ಕಬಳ್ಳಾಪುರದಲ್ಲಿ ತಿರುಗೇಟು ನೀಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ . ಹೆಬ್ಬೆಟ್ಟು ಪಾರ್ಟಿ ಜೆಡಿಎಸ್ ಪಾರ್ಟಿ. ಅವರ ಕುಟುಂಬ ದವರು ಹೇಳಿದ್ರೆ ಮಾತ್ರ ಹೆಬ್ಬೆಟ್ಟು ಒತ್ತೋದು. ಈಗಲೂ ದೇವೆಗೌಡ. ಇನ್ನು ಮಂದೆನೂ ದೇವೇಗೌಡ. ನಮ್ಮಲ್ಲಿ ವಾಜಪೇಯಿ, ಅಡ್ವಾಣಿ, ನರೇಂದ್ರ ಮೋದಿ ಇದ್ದಾರೆ .
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ . ಬಸವರಾಜ್ ಬೊಮ್ಮಾಯಿ ನಿನ್ನೆ ಮೊನ್ನೆ ಬಂದವರಲ್ಲ ಇಂಜಿನಿಯರ್ ಓದಿದ್ದಾರೆ . ಜೆ ಹೆಚ್ ಪಟೇಲ್, ದೇವೇಗೌಡ, ರಾಮಕೃಷ್ಣ ಹೆಗಡೆ ಬಳಿ ತರಬೇತಿ ಪಡೆದಿದ್ದಾರೆ . ನಮ್ಮ ಮುಖ್ಯಮಂತ್ರಿ ಸರಳ ಮುಖ್ಯಮಂತ್ರಿ. ಬಡವರ ಕೈಗೆ ಸಿಗುವ ವ್ಯಕ್ತಿ ಎಂದು ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ. ಇದನ್ನೂ ಓದಿ : – ಚಿಕ್ಕಮಗಳೂರು ಪ್ರವಾಸದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ
ಓಟರ್ ಐಡಿ ಹಗರಣ ವಿಚಾರವಾಗಿ ಮಾತನಾಡಿದ ಅವರು, ಓಟರ್ ಐಡಿ ಹಗರಣದಲ್ಲಿ ಸರಕಾರದ ಪಾತ್ರ ಏನೂ ಇಲ್ಲ, ಸುಮ್ ಸುಮ್ಮನೇ ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. 2012 ರಿಂದಲೂ ಚಿಲುಮೆ ಸಂಸ್ಥೆ ಇದರ ಉಸ್ತುವಾರಿ ಹೊತ್ತಿದೆ. ಆಗಿನಿಂದ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿತ್ತು, ಈಗ ಬಾಯಿಬಿಚ್ತಿದೆ . ಈ ಕುರಿತು ಚುನಾವಣೆ ಆಯೋಗ ತನಿಖೆ ನಡೆಸುತ್ತಿದೆ. ಈ ಕುರಿತು ಸಿಎಂ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
SC-ST ಮೀಸಲಾತಿ ನೀಡಿದ ಮೇಲೆ ಕಾಂಗ್ರೆಸ್ ( CONGRESS ) ಗೆ ಹೊಟ್ಟೆಉರಿ ಬಂದಿದೆ. 75ವರ್ಷಗಳಿಂದ ಕಾಂಗ್ರೆಸ್ ಕೆಂಪೇಗೌಡರಿಗೆ ಗೌರವ ನೀಡಿರಲಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ದೇಶ ಹಾಗೂ ರಾಜ್ಯದಲ್ಲಿ 50 ವರ್ಷ ಆಡಳಿತದಲ್ಲಿತ್ತು. ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್ ನ ಯಾವುದೇ ಕೊಡುಗೆ ಇಲ್ಲ. ಮುಂದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ. ಈ ಬಾರಿ ಚುನಾವಣೆಯಲ್ಲಿಕಾಂಗ್ರೆಸ್ ಸೋತ್ರೆ ಎಲ್ಲಂದರಲ್ಲಿ ಓಡಿ ಹೋಗ್ತಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಅಯ್ಯಪ್ಪನ ಸನ್ನಿಧಾನಕ್ಕೂ ಕಾಲಿಟ್ಟ ಧರ್ಮ ದಂಗಲ್