ತೀವ್ರ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ನೆರೆಯ ಶ್ರೀಲಂಕಾ( sri lanka ) ದಲ್ಲಿ ಜನರ ಸಹನೆಯ ಕಟ್ಟೆ ಒಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ.
ಜನರ ಆಕ್ರೋಶಕ್ಕೆ ಹೆದರಿ ಗೊಟಬಯ (Gotabaya ) ಅರಮನೆ ತೊರೆದಿದ್ದು, ಇದೀಗ ಪ್ರತಿಭಟನಾಕಾರರು ತಮ್ಮ ಕುಟುಂಬ, ಮಕ್ಕಳೊಂದಿಗೆ ತೆರಳಿ, ಅರಮನೆಯಲ್ಲಿ ಸುತ್ತಾಡುತ್ತಾ, ಅಲ್ಲಿಯೇ ಊಟ, ಜಿಮ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ : – ಲಂಕಾದಲ್ಲಿ ತೀವ್ರಗೊಂಡ ಪ್ರತಿಭಟನೆ- ಪ್ರಧಾನಿ ಸಿಂಘೆ ಮನೆಗೆ ಬೆಂಕಿ
ಅಪಾರ ಪ್ರಮಾಣದಲ್ಲಿ ಅರಮನೆಯತ್ತ ಧಾವಿಸುತ್ತಿರುವ ಜನರು, ಅರಮನೆ ತುಂಬೆಲ್ಲಾ ಓಡಾಡುತ್ತಾ, ಸೆಲ್ಫಿ, ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ. ಇದೀಗ ಭ್ರಷ್ಟಾಚಾರದಿಂದ ಮುಕ್ತರಾಗಿದ್ದೇವೆ. ಇದು ಶಾಂತಯುತವಾಗಿದೆ. ಕುಟುಂಬ, ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : – ಪತ್ರಕರ್ತರಿಗೆ ಟೀ ತಂದು ಕೊಟ್ಟ ಸುಧಾ ಮೂರ್ತಿ ಪುತ್ರಿ- ಟೀ ಕಪ್ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ..?