ಕುರುಬ ( KURUBA ) ಸಮುದಾಯವನ್ನ ಎಸ್ ಟಿ ( ST ) ಮೀಸಲಾತಿ ಸೇರ್ಪಡೆಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಬೆಳಗಾವಿ( BELGAVI ) ಯ ಸುವರ್ಣಸೌಧದ ಬಳಿ ಕೊಂಡಸ್ಕೊಪ್ಪದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಸರ್ಕಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ರು. ಸುಡು ಬಿಸಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಧರಣಿ ನಡೆಸಿದ್ರು. ಎಂಟಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ಕುರುಬ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನ ಸಚಿವ ಸಂಪುಟದಲ್ಲಿ ಮಂಡನೆ ಮಾಡಬೇಕು. ಇದನ್ನು ಓದಿ : – ಸಿದ್ದರಾಮಯ್ಯನ ಕರೆದುಕೊಂಡು ಬಂದು ಬಲಿ ಕೊಡ್ತಾ ಇದ್ದಾರೆ – ವರ್ತೂರು ಪ್ರಕಾಶ್
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನ ಕಳುಹಿಸಿ ಕುರುಬ ಸಮಯವನ್ನ ಎಸ್ಟಿ ಮೀಸಲಾತಿಗೆ ಸೇರಿಸಬೇಕು. ವಲಸೆ ಜೀವನ ಸಾಗಿಸುತ್ತಾ ಶಿಕ್ಷಣದಿಂದ ವಂಚಿತರಾರ ಕುರುಬ ಸಮುದಾಯವನ್ನ ಸಿಎಂ ಬೊಮ್ಮಾಯಿ ಮುಂಬರುವ ಚುನಾವಣೆಯ ಒಳಗಾಗಿ ಎಸ್ಟಿಗೆ ಸೇರಿಸಬೇಕೆಂದು ಒತ್ತಡ ಹೇರಿದ್ರು. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡದೆ ಹೋದ್ರೆ ಬಸವರಾಜ್ ಬೊಮ್ಮಾಯಿ ( BASAVARAJ BOMMAI ) ಗೆ ಮುಂಬರುವ ಚುನಾವಣೆಯಲ್ಲಿ ನಾವೇನೂ ಎಂಬುದು ತೋರಿಸುತ್ತೆವೆಂದು ಸವಾಲು ಹಾಕಿದ್ದಾರೆ.
ಇದನ್ನು ಓದಿ : – 40 ದಿನದಲ್ಲಿ 223 ಕೋಟಿ ರೂಪಾಯಿ ಆದಾಯ ಗಳಿಸಿದ ಶಬರಿಮಲೆ ದೇವಾಲಯ