ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಇವನಾ..? -ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡುಗಿದ ಸಿದ್ದರಾಮಯ್ಯ

ತಾಲ್ಲೂಕು ಕೋರ್ಟ್ ನಲ್ಲಿ ವಕೀಲರಾಗಿದ್ದವರು ಸಿದ್ದರಾಮಯ್ಯ (SIDDARAMAIAH )ಎನ್ನುವ ಸಂಸದ ಪ್ರತಾಪ್ ಸಿಂಹ ( PRATHAP SIMHA ) ಮಾತಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ನಾನು ಆರ್ಥಿಕತೆ ಓದಿಲ್ಲ. ನಾನು ಓದಿರುವುದು ಲಾ .ಮೈಸೂರು ಕೋರ್ಟ್ ನಲ್ಲಿ ವಕೀಲನಾಗಿದ್ದೆ. ಹೈಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡಲಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ತಜ್ಞರಾ ? ಸಂಸದ ಪ್ರತಾಪ್ ಸಿಂಹ ಸಿಎಂ ಬೊಮ್ಮಾಯಿ ಆರ್ಥಿಕ ತಜ್ಞರಾ ? ಎಂದು ಪ್ರಶ್ನಿಸಿದ್ದಾರೆ.

ನಾನು ಹೇಳುವುದು ಸರಿ ತಪ್ಪು ಹೇಳಬೇಕಾದರೆ ಇವರು ಆರ್ಥಿಕ ತಜ್ಙರಾಗಿರಬೇಕಲ್ಲಾ ? ಪಾಪ ಪ್ರತಾಪ್ ಸಿಂಹನಿಗೆ ಗೊತ್ತಾಗಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ. ಮೈಸೂರು ಬೆಂಗಳೂರು ರಸ್ತೆ ವಿಚಾರವಾಗಿ ಮಾತನಾಡಿದ ಅವರು ಇದು ನಮ್ಮ ಕಾಲದಲ್ಲಿ ಅಪ್‌ಗ್ರೇಡ್ ಆಗಿದ್ದು. ಅದು ಪ್ರತಾಪಸಿಂಹ ಮಾಡಿದಲ್ಲ. ಇವರು ಕೇವಲ ಮೈಸೂರು ಎಂಪಿ ಮಂಡ್ಯಗೆ ಇವರಿಗೆ ಬರುತ್ತಾ ? ಪ್ರತಾಪಸಿಂಹ ಬರೀ ಸುಳ್ಳೇ ಹೇಳುತ್ತಾರೆ. ಮೈಸೂರಿನಲ್ಲಿ ಆಸ್ಪತ್ರೆ, ಕಾಲೇಜು, ಹಾಸ್ಟೆಲ್ , ಡಿಸಿ ಕಚೇರಿ ಪೊಲೀಸ್ ಕಮಿಷನರ್ ಕಚೇರಿ ಕಟ್ಟಿದ್ದು ಇವನಾ ? ಅಂಬೇಡ್ಕರ್ ಭವನ ಕಟ್ಟಿದ್ದು ಯಾರು ಇವನಾ ? ಎಂದು ಏಕವಚನದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ್ರು.
ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ಪಠ್ಯ ಪರಿಷ್ಕರಣೆ ವಿಚಾರ
ಅಂಬೇಡ್ಕರ್ ಹಿಂದೂ ಅಲ್ಲವಾ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಅವರ ಕೆಲವು ವಾಕ್ಯ ತೆಗೆದಿದ್ದೀರಾ ಸಂವಿಧಾನ ಶಿಲ್ಪಿ ಅನ್ನೋದನ್ನು ತೆಗೆದಿದ್ದೀರಾ. ಕುವೆಂಪು ಬಸವಣ್ಣ ನಾರಾಯಣ ಗುರು ಹಿಂದೂ ಅಲ್ವಾ ? ಬಿಜೆಪಿ ಅವರು ಯಾರನ್ನು ಹಿಂದೂ ಅಂತಾರೆ ಯಾರನ್ನು ಅಲ್ಲ ಅಂತಾರೆ ಅವರಿಗೆ ಗೊತ್ತು. ನಾನು ಹಿಂದೂ ಅಲ್ವಾ ? ಅವರು ಹೇಳಿದವರು ಮಾತ್ರ ಹಿಂದೂನಾ ? ಕುವೆಂಪು, ಅಂಬೇಡ್ಕರ್, ಭಗತ್ ಸಿಂಗ್ , ನಾರಾಯಣ್ ಗುರು ಅವರಿಗೆ ಅವಮಾನ ಮಾಡಿದ್ದಾರೆ. ಕೃತಿ ಚೌರ್ಯ ಮಾಡಿದ್ದಾರೆ. ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕರಣೆ ರಿಜೆಕ್ಟ್ ಮಾಡಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿರುವುದನ್ನು ಅನುಷ್ಠಾನ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನು ಓದಿ :-  ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ


ಸಿಎಂ ಇಬ್ರಾಹಿಂ ವಿರುದ್ದ ವಾಗ್ದಾಳಿ
ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ. ಅವನು ಜೆ.ಡಿ.ಎಸ್ ನಲ್ಲಿ ಕ್ಯಾಪ್ಟೀವ್ ಪ್ರೆಸಿಡೆಂಟ್ ಇದ್ದಂತೆ. ಕುಳಿತುಕೋ ಅಂದರೆ ಕೂಳಿತುಕೊಳ್ಳಬೇಕು. ನಿಂತುಕೋ ಅಂದರೆ ನಿಂತುಕೊಳ್ಳಬೇಕು. ಎಂಎಲ್ಸಿ ಮಾಡುತ್ತೇವೆ ಅಂತ ಕರಕೊಂಡು ಹೋದರು ಎಂಎಲ್ಸಿ ಮಾಡಿದ್ದಾರಾ ? ಏನೋ ಒಂದು ಹುದ್ದೆ ಕೊಟ್ಟಿದ್ದಾರೆ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಇಬ್ರಾಹಿಂ ವಿರುದ್ದ ಕಿಡಿಕಾರಿದ್ರು.


ಕುಮಾರಸ್ವಾಮಿ ವಿರುದ್ಧ ಸಿದ್ದು ಗರಂ
ಸಿದ್ದರಾಮಯ್ಯ ಎಂ.ಎಲ್.ಎ ಗಳನ್ನು ಕಳುಹಿಸಿದರು ಅಂದರು. ಈಗ ಈ ರೀತಿ ಹೇಳುತ್ತಿದ್ದಾರೆ ಯಾವುದು ಸತ್ಯ ಯಾವುದು ಸುಳ್ಳು. ಅವರ ರೀತಿ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಟಾರ್ಚರ್ ವಿಚಾರ ಅಂದು ಏಕೆ ಹೇಳಲಿಲ್ಲ ? ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ ಆಗ ಟಾರ್ಚರ್ ಬಗ್ಗೆ ಹೇಳಿಲ್ಲ. ಈಗ ಹೇಳಿದರೆ ನಂಬಿಕೊಳ್ಳಬೇಕಾ ? ಕುಮಾರಸ್ವಾಮಿ ಅವರನ್ನೇ ಈ ಬಗ್ಗೆ ಕೇಳಿ ಎಂದು ತಿಳಿಸಿದ್ರು.

ಇದನ್ನು ಓದಿ :-  ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!