ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಬಳಿ ಸಿಎಂ ಬೊಮ್ಮಾಯಿ ( BASAVARAJ BOMMAI ) ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲದರಲ್ಲೂ ರಾಜಕಾರಣ ಮಾಡುವಂತದ್ದು ಬಹಳ ಕೆಳ ಹಂತಕ್ಕೆ ಹೋಗ್ತಿದೆ. ಕೇಸರಿ ಬಣ್ಣ ನಮ್ಮ ಭಾರತದ ಧ್ವಜದಲ್ಲೇ ಇದೆ.
ಕೇಸರಿ ಬಣ್ಣ ಕಂಡರೆ ಯಾಕೆ ಇವರಿಗೆ ಅಷ್ಟು ಅಲರ್ಜಿ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆ ಮಾಡ್ತಿದ್ದೇವೆ. ಅವರು ತೊಡವಂತದ್ದೆಲ್ಲ ಕೇಸರಿ . ಅದರಲ್ಲಿ ಬೇರೆ ಯಾವುದೇ ಅರ್ಥ ಇಲ್ಲ. ವಿವೇಕಾನಂದ ಅಂದರೆ ಎಲ್ಲರಿಗೂ ಜ್ಞಾನ ನೀಡುವಂತವರು. ಅದನ್ನು ಎಲ್ಲರು ಕಲಿಬೇಕು ವಿನಹ ರಾಜಕಾರಣ ಮಾಡೋದು ಸರಿಯಲ್ಲ ಎಂದು ಹೇಳಿದ್ರು. ಇದನ್ನೂ ಓದಿ : – ನನ್ನ ವಿರುದ್ದ ಸ್ಪರ್ಧೆ ಮಾಡಿದ್ರೆ ಜನ ಸಿದ್ದರಾಮಯ್ಯಗೆ ಬೈತಾರೆ – ವರ್ತೂರು ಪ್ರಕಾಶ್
ಇಂದು ಮಕ್ಕಳನ್ನ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡ್ತಿದ್ದ ಜವಹರಲಾಲ್ ನೆಹರು ( Jawaharlal Nehru ) ಜನ್ಮ ದಿನಾಚರಣೆ. ನಾವೆಲ್ಲರೂ ಮಕ್ಕಳ ದಿನಾಚರಣೆ ಆಚರಿಸುತ್ತಿದ್ದೇವೆ. ಜವಹರಲಾಲ್ ನೆಹರು ಅವರು ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದವರು. ಭಾರತದ ಮೊದಲ ಪ್ರಧಾನಿಯಾಗಿದ್ದವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಮುನ್ನಡೆಸಿದವರು ಜವಹರಲಾಲ್ ನೆಹರು ಎಂದು ಹೇಳಿದ್ರು.
ಇದನ್ನೂ ಓದಿ : – ತಮಿಳುನಾಡಿನಲ್ಲಿ ಮುಂದುವರೆದ ಮಳೆ – ಮೈಲಾಡುತುರೈ ಜಿಲ್ಲೆಯ ಶಾಲಾ,ಕಾಲೇಜುಗಳಿಗೆ ರಜೆ