ಜನಾರ್ದನ್ ರೆಡ್ಡಿ ( JANARDHAN REDDY ) ಹೊಸ ಪಕ್ಷ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( C.M IMBRAHIM ) ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಪಕ್ಷ ಮಾಡಿದ್ದು ಬಹಳ ಸಂತೋಷ.. ರೆಡ್ಡಿ ಪಕ್ಷದಿಂದ ನಮಗೇನೂ ಹಾನಿಯಿಲ್ಲ. ರೆಡ್ಡಿ ಬಿಜೆಪಿ ಇದ್ದಾಗ ಏನಾಗಿತ್ತು. ಬಿಟ್ಟಾಗ ಏನಾಗುತ್ತೆ ಅನ್ನೋದು ಚುನಾವಣೆಯಲ್ಲಿ ಹೇಳಬೇಕು ಎಂದು ತಿಳಿಸಿದ್ರು.
ಬಜಾರ್ ನಲ್ಲಿ ಬೇಡೋರು ಬಹಳ ಜನ ಬರ್ತಾಯಿದ್ದಾರೆ. ಬಿಜೆಪಿ ( BJP ) ಯಿಂದ ನೊಂದು ಹೋರ ಬಂದಿರುವುದಾಗಿ ಅವರು ಹೇಳಿದ್ದಾರೆ .ನಾವು ನೊಂದು ಬೆಂದವರಲ್ಲ, ಜೈಲಲ್ಲಿ ಹುಟ್ಟಿದವ್ರು ನಾವು.. ನಾವು ಪಾರ್ಟಿ ಕಟ್ಟಿದ್ದು, ನಮಗೇನು ಸಿಗಲಿಲ್ಲ ಅಂತಲ್ಲ. ರಾಜ್ಯದ 7 ಕೋಟಿ ಜನ್ರಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ರು.
ಇದನ್ನು ಓದಿ : – ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆಯಲ್ಲಿ ನಟ ಕಮಲ್ ಹಾಸನ್ ಭಾಗಿ