ಹಳ್ಳಿಗೆ ಸುಮ್ಮನೆ ಹೋಗಿ ಮಲಗಿ ಬರೋದಾ? ಆರ್.ಅಶೋಕ್ ಗೆ ಸಿದ್ದರಾಮಯ್ಯ ಪ್ರಶ್ನೆ

ವಿಧಾನಸಭೆ (Vidhanasabhe) ಯಲ್ಲಿ ನಿಯಮ 69 ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ  ಪಶುಸಂಗೋಪನೆ ಸಮಸ್ಯೆಗಳ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಧಾನಸಭೆ (Vidhanasabhe) ಯಲ್ಲಿ ನಿಯಮ 69 ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ  ಪಶುಸಂಗೋಪನೆ ಸಮಸ್ಯೆಗಳ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಆರ್. ಅಶೋಕ್ (R.Ashok) ಅವರು ಪುಣ್ಯಕ್ಕೆ ಪಶುಸಂಗೋಪನೆ ಸಚಿವರು ಇಲ್ಲ, ಇದ್ದಿದ್ರೆ ಲೆಕ್ಕದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಓಡಿ ಹೋಗಬೇಕಿತ್ತು ಎಂದರು.

ಈ ವೇಳೆ ನೀನೇ ಹೇಳಿ ಬಿಡಪ್ಪ. ಹಳ್ಳಿಯಲ್ಲಿ ಹೋಗಿ ಮಲಗ್ತಿಯಲ್ಲಾ, ಹಳ್ಳಿಯಲ್ಲಿ ಮಲಗಿದವರಿಗೆ ಇದೆಲ್ಲಾ ಗೊತ್ತಾಗಬೇಕಲ್ವಾ? ತಿಳಿದುಕೊಂಡು ಹೋಗಬೇಕಲ್ಲಾ, ಸುಮ್ಮನೆ ಮಲಗಿ ಬರೋದಾ?” ಎಂದು ಪ್ರಶ್ನಿಸಿದರು.
ನಾನು ಸಣ್ಣ ವಯಸ್ಸಿನಲ್ಲಿ ಅದೆಲ್ಲಾ ಮಾಡಿ ಬಂದಿದ್ದೇನೆ. ಆದರೆ, ನಾನು ಹೇಳಿದ್ದು, ನಿಮ್ಮ ಲೆಕ್ಕ ನೋಡಿ ಅವರು ಓಡಿ ಹೋಗ್ತಿದ್ರು ಎಂದು ಸ್ಪಷ್ಟಪಡಿಸಿದರು. ಇದಕ್ಕೆ ನಕ್ಕ ಸಿದ್ದರಾಮಯ್ಯ (Siddaramaiah) ಅವರು ಅದಕ್ಕೆ ಬಂದಿಲ್ಲ, ಉತ್ತರ ಕೊಟ್ಟಿಲ್ಲ, ಸಹವಾಸ ಬೇಡ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ರು. 25, 000 ರಾಸುಗಳು ಸತ್ತು ಹೋಗಿವೆ ಚರ್ಮರೋಗದಿಂದ. ಪಶುಸಂಗೋಪನೆ ನಿರ್ದೇಶಕರು ಕೊಟ್ಟ ಉತ್ತರದಲ್ಲಿ 1 ಕೋಟಿ 14 ಲಕ್ಷ ಜಾನುವಾರು ಇವೆ ಎಂದಿದ್ದಾರೆ. ಮತ್ತೊಮ್ಮೆ ಕೊಡುವಾಗ 1 ಕೋಟಿ 29 ಲಕ್ಷ ಇದೆ ಎಂದು ಹೇಳಿದ್ದಾರೆ. 15 ಲಕ್ಷ ಏನಾಯ್ತು ಎಂದಿದ್ದಕ್ಕೆ ಉತ್ತರ ಇಲ್ಲ. ಅವರೇ ಕೊಟ್ಟ ಉತ್ತರ ಬೇಜವಾಬ್ದಾರಿ ಇರಬಹುದು. ಅವರಿಗೆ ಬೇಜವಾಬ್ದಾರಿ ಇದೆ ಎಂದರೆ ಸರ್ಕಾರಕ್ಕೆ ಬೇಜವಾಬ್ದಾರಿ ಇದೆ ಎಂದು ಅರ್ಥ ಎಂದು ಕಿಡಿಕಾರಿದರು.

ಇದನ್ನು ಓದಿ : –  ರಾಮನಗರದಲ್ಲಿ ಇವರ ಆಟ ನಡಿಯಲ್ಲ – ಅಶ್ವತ್ಥ್ ನಾರಾಯಣ್ ಗೆ ಹೆಚ್ಡಿಕೆ ತೀಕ್ಷ್ಣ ಪ್ರತಿಕ್ರಿಯೆ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!