ಜಾರ್ಖಂಡ್ (Jharkhand) ನ ರಾಂಚಿ, ಗುಜರಾತ್ (Gujrath) ನ ಅಹಮದಾಬಾದ್, ಕೇರಳದ ಮಲಪ್ಪುರಂನ ಕೆಲವು ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮನೆ ಮಾಡಿದೆ.
ಈ ಕುರಿತು ಪರಿಶೀಲನೆಗೆ ಕೇಂದ್ರ ಸರ್ಕಾರ ಉನ್ನತ ತಂಡಗಳನ್ನು ಈ ಪ್ರದೇಶಗಳಿಗೆ ನಿಯೋಜಿಸಿದ್ದು ತನಿಖೆ ನಡೆಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ತಂಡಗಳು ರಾಜ್ಯ ಆರೋಗ್ಯಾಧಿಕಾರಿಗಳಿಗೆ ಸಹಾಯ ಮಾಡಲಿವೆ. ದಡಾರ ಹೆಚ್ಚುತ್ತಿರುವ ಕಾರಣ ಮತ್ತು ಅದರ ನಿಯಂತ್ರಣ ಸಂಬಂಧ ಕಾರ್ಯನಿರ್ವಹಿಸಲಿದ್ದಾರೆ. ಕೊರೊನ ಹಿನ್ನೆಲೆಯಲ್ಲಿ ದಡಾರ ಲಸಿಕೆಯನ್ನು ನಿರ್ಲಕ್ಷಿಸಿರುವುದೇ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ : – ಸಮಂತಾ ಸಿನಿಮಾಗೆ ಸಂಕಷ್ಟ – ಕೋರ್ಟ್ ನಿಂದ ತಡೆಯಾಜ್ಞೆ