ಮಾಜಿ ಸಿಎಂ ಹೆಚ್ಡಿಕೆ ಪಂಚರತ್ನ ಯಾತ್ರೆ (Pancharatna yatre) ಮುಂದುವರೆದಿದೆ. ಗ್ರಾಮ ವಾಸ್ತವ್ಯ ಹೂಡಿದ್ದ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಚಿನ್ನಸಂದ್ರದಲ್ಲಿ ಮಾತನಾಡಿದ ಕುಮಾರಸ್ವಾಮಿ (Kumarswamy) ನಿನ್ನೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಆರಂಭವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಅಭೂತ ಪೂರ್ವವಾಗಿ ರಥಯಾತ್ರೆ ನಡೆಯುತ್ತಿದೆ. ಮಳೆ (Rain)ಯಲ್ಲೂ ಸಹ ಕಾರ್ಯಕರ್ತರು ಅಭಿಮಾನಿಗಳು ಚದುರಲಿಲ್ಲ.
ಬೆಳಗ್ಗೆ ಪ್ರಾರಂಭವಾದ ಮಳೆಯಲ್ಲೂ ಜನತೆಯ ಸುನಾಮಿ ರಾತ್ರಿವರೆಗೂ ಇತ್ತು. ರಾತ್ರಿ ಕೆಲವು ಭಾಗದಲ್ಲಿ ಮಳೆಯಿಂದ ಸಮಸ್ಯೆ ಆದ್ರೂ, ಮಳೆಯಲ್ಲಿ ನೆನೆದು ಸ್ವಾಗತ ಕೋರಿದ್ರು. ಕಳಸ ಹೊತ್ತು ಊರಿನ ಪ್ರಾರಂಭದಿಂದದ, ಕೊನೆವರೆಗೂ ಇದ್ರು. ನನ್ನ ಜೀವನ ಪರ್ಯಂತ ಅವರ ಋಣ ತೀರಿಸಲಾಗಲ್ಲ ಎಂದು ಹೆ ಚ್ಡಿಕೆ ಹೇಳಿದ್ರು.
ಇದೇ ನನ್ನ ಹೋರಾಟಕ್ಕೆ ಸ್ಪೂರ್ತಿ. ಪಂಚರತ್ನ ಯೋಜನೆ ನಾನು ಏನು ತೀರ್ಮಾನ ಮಾಡಿದ್ದೇನೆ. ಜನರ ಮತ ಪಡೆಯಲು ಅಲ್ಲ, ಅವರ ಕಷ್ಟ ಕೇಳಲು ಮಾತ್ರ ಎಂದು ತಿಳಿಸಿದರು. ಬದುಕಿನ ಸವಾಲು ಎದುರಿಸುತ್ತಿರೋರು ನನ್ನ ಬಳಿ ಬರ್ತಿದ್ದಾರೆ. ರಾಜ್ಯದ ಚಿತ್ರಣದ ಐದು ಕಾರ್ಯಕ್ರಮ ಇದು. ನನ್ನದು ಭಾಗ್ಯದ ಕಾರ್ಯಕ್ರಮ ಅಲ್ಲ ಎಂದು
ಸಿದ್ದರಾಮಯ್ಶಗೆ (Siddaramaiah) ಟಾಂಗ್ ನೀಡಿದ್ರು. ಇದು ಬೇಸ್ ಬಿಲ್ಡ್ ಮಾಡಿ ಪ್ರತೀ ಕುಟುಂಬ ಬದುಕಲು ಮಾಡುವ ಕಾರ್ಯಕ್ರಮ. ಮುಂದಿನ ದಿನದಲ್ಲಿ ಇದಕ್ಕೆ ರಾಜಿ ಆಗುವ ಪ್ರಶ್ನೆ ಇಲ್ಲ. ತಾಯಿ ಚಾಮುಂಡಿ ಅನುಗ್ರಹ ಕೂಡ ಇದೆ. ಜನರ ಭಾವನೆ ಏನಿದೆ ಅದನ್ನ ಗಮನಿಸ್ತಿದ್ದೇನೆ. ಇದು ಜನರ ಹೃದಯಕ್ಕೆ ಮುಟ್ಟುತ್ತಿದೆ ಎಂದು ತಿಳಿಸಿದ್ರು. ನಿನ್ನೆ ಒಂದು ಹಳ್ಳಿಯಲ್ಲಿ ದಲಿತ ಕುಟುಂಬದ ಹೆಣ್ಣುಮಗಳು ರಸ್ತೆಯಲ್ಲಿ ನಿಲ್ಲಿಸಿದ್ರು. ಅಲ್ಲಿ ನೂರು ಮಕ್ಕಳು ಓದ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಕಲಿಯಬೇಕು ಎಂದು ಹೇಳಿದ್ರು. ಮುಖ್ಯ ಶಿಕ್ಷಕರನ್ನ ಕೇಳಿದ್ರೆ ಮನೆಯಲ್ಲಿ ಓದಲು ಹೇಳು ಅಂತ ಹೇಳಿದ್ದಾರೆ. ಇದನ್ನ ಸರಿಪಡಿಸಲು ಆ ಹೆಣ್ಣು ಮಗಳು ಹೇಳಿದ್ರು. ಇದನ್ನೂ ಓದಿ : – ಉಗ್ರ ಶಾರಿಕ್ ಗೆ ಇತ್ತ ಬೆಂಗಳೂರು ನಂಟು..?
ಹೆಣ್ಣುಮಗಳನ್ನ ಅಭಿನಂದಿಸ್ತೇನೆ. ಅವಳ ದೈರ್ಯವನ್ನ ಮೆಚ್ಚಬೇಕು ಎಂದು ಎಚ್ ಡಿ ಕೆ ಶ್ಲಾಘಿಸಿದ್ರು. ನಾನು ಅಧಿಕಾರಕ್ಕೆ ಬಂದರೆ ದಲಿತರಿಗೆ, ಮಹಿಳೆಯರಿಗೆ ಡಿಸಿಎಂ ಮಾಡ್ತೀನಿ ಎಂದು ಪುನರುಚ್ಛರಿಸಿದ್ರು. ಕೋಲಾರ ಜನತೆಗೆ ನನ್ನ ಸವಾಲ್ ಅಲ್ಲ, ಸ್ಪಷ್ಟ ಭರವಸೆ ಏನಂದ್ರೆ ನಮಗೆ ಕೋಲಾರ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಇದೆ. ಕೊಳಚೆ ನೀರು ಬಿಡುವುದು ನಮ್ಮ ಉದ್ದೇಶ ಅಲ್ಲ. ಶುದ್ದ ಕುಡಿಯುವ ನೀರು ಕೊಡುವುದು ನಮ್ಮ ಗುರಿ ಎಂದು ಹೇಳಿದರು. ಕೊಳಚೆ ನೀರಲ್ಲ, ನದಿ ನೀರು ಹರಿಸುವುದೇ ನಮ್ಮ ಗುರಿ ಎಂದು ಮಾತು ನೀಡಿದ್ರು.
ಇದನ್ನೂ ಓದಿ : – ಊಟಿಯಂತಾದ ಸಿಲಿಕಾನ್ ಸಿಟಿ – ಬೆಂಗಳೂರು ಸೇರಿ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ