ಪದ್ಮಶ್ರೀ ಮಂಜಮ್ಮ ಜೋಗತಿಯವರ ಜಾನಪದ ಅಕಾಡೆಮಿ ಅಧ್ಯಕ್ಷೆಯ ಅವಧಿ ಪೂರ್ಣ ಗೊಂಡಿದೆ. 3 ವರ್ಷಗಳ ಕಾಲ ಅಧಿಕಾರವಧಿಯಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿದ್ದೇನೆ ಎಂದು ಮಂಜಮ್ಮ ಜೋಗತಿ ( manjamma jogathi ) ಭಾವುಕರಾಗಿ ನುಡಿದಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ಕಾರ್ಯಕ್ರಮಗಳನ್ನ ಮಾಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಕೂರದೇ ಓಡಾಡಿ ಕಾರ್ಯಕ್ರಮಗಳನ್ನ ಮಾಡಿದ್ದೇನೆ. ಹಾವೇರಿ ಜಿಲ್ಲೆಯ ಮೂಗಳಿ ಗ್ರಾಮದಲ್ಲಿ ಜಾನಪದ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದೆ. ಇದನ್ನೂ ಓದಿ :- ಆಂಧ್ರಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭ
ಸ್ಥಳೀಯ ಪ್ರತಿಭೆಗಳನ್ನ ಗುರುತಿಸಿ ಅಕಾಡೆಮಿ ಪ್ರಶಸ್ತಿ ಬರದೇ ಇರುವವರಿಗೆ ಗೌರವ ಸಂಭಾವನೆ ನೀಡಿದ್ದೇವೆ. 2.5 ಕೋಟಿ ರೂ. ವೆಚ್ಚದಲ್ಲಿ ಸಾಧಕರ ಜೀವನ ಕಥೆ ಡಿಜಿಟ್ ಆತ್ಮಕಥೆ ಮಾಡುವುಕ್ಕೆ ಹಲವಾರು ಸಮಿತಿಗಳನ್ನ ನೇಮಕ ಮಾಡಿದ್ದೆ . ಅಷ್ಟರಲ್ಲಿ ನನ್ನ 3 ವರ್ಷಗಳ ಕಾಲ ಅಧಿಕಾರವಧಿ ಮುಕ್ತಾಯಗೊಂಡಿತು. ಮತ್ತೆ ಮರಳಿ ಅದೇ ವೃತ್ತಿಗೆ ತೆರಳಬೇಕಿದೆ ಎಂದು ಭಾವುಕರಾಗಿದ್ದಾರೆ.
ಇದನ್ನೂ ಓದಿ :- ನನ್ನ ಅಪ್ಪನಾಣೆ ಇನ್ನೂ 5 ರ್ಷ ನಾನೇ MLA – ಎಸ್. ಆರ್ ಶ್ರೀನಿವಾಸ್