ಸಿಎಂ ಅಭ್ಯರ್ಥಿ ಯಾರು ಎಂದು ಆಮೇಲೆ ನೋಡೋಣ. ಮೊದಲು ಪಕ್ಷ ಸಂಘಟನೆ ಮಾಡೋಣ. ಮತ ಬ್ಯಾಂಕ್ ಕಟ್ಟಿ ಮಾಡಿಕೊಳ್ಳಲು ನಮ್ಮ ಪ್ರಯತ್ನ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ( sathish jaraki holi ) ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈಫಲ್ಯದ ಬಗ್ಗೆ ಜನರಿಗೆ ಹೇಳುವ ಪ್ರಯತ್ನ ಮಾಡಬೇಕು. ಜಿಲ್ಲೆಯ 18 ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡುತ್ತೇವೆ. ದಕ್ಷಿಣ ಕ್ಷೇತ್ರದ ಮತ ಹೆಚ್ಚು ಮಾಡಲು ಪ್ರಯತ್ನ ಮಾಡಲಾಗುವುದು. ಬೇಸ್ ಗಟ್ಟಿ ಇದ್ರೆ ಕ್ಯಾಂಡಿಡೇಟ್ ಬರ್ತಾರೆ. ಬೆಳಗಾವಿ ( belgavi ) ದಕ್ಷಿಣ ಮತಕ್ಷೇತ್ರ ಸೋಲು ಅಭ್ಯರ್ಥಿ ಬೇರೆ ಬೇರೆ ಆಗಿದ್ದು. ಮೂರು ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಚುನಾವಣೆ ಮುಗಿದ ಬಳಿಕ ಸಂಘಟನೆಯ ಕಡೆ ಗಮನ ಹರಿಸಬೇಕು. ಮಾಜಿ ಶಾಸಕರು, ಅಭ್ಯರ್ಥಿ ಇಲ್ಲದ ಕಡೆಯಲ್ಲಿ ನಾವೇ ಸಂಘಟನೆ ಜವಾಬ್ದಾರಿ ವಹಿಸಿದ್ದೇವೆ. ಪಕ್ಷದ ಅಧ್ಯಕ್ಷ ಬದಲಾವಣೆ ಚರ್ಚೆ ಸದ್ಯ ಇಲ್ಲ ಎಂದು ತಿಳಿಸಿದ್ರು. ಇದನ್ನೂ ಓದಿ :- ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅನಾಹುತ – ಕಂಪನಿ ಮ್ಯಾನೇಜರ್ ಬಂಧನ – ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಹಾಲಪ್ಪ ಆಚಾರ್
ಶಾಸಕ ಜಮೀರ್ ಅಹಮ್ಮದ್ ಖಾನ್ ನೋಟಿಸ್ ವಿಚಾರ
ನಮಗೆ ಸಂಬಂಧಪಟ್ಟ ವಿಚಾರ ಇದಲ್ಲ. ರಾಜಕೀಯ ಅಂದರೆ ಗೊಂದಲ ಇರಲೇಬೇಕು ಇರುತ್ತೆ. ಪಕ್ಷದಲ್ಲಿ ನಮ್ಮ ವಿಚಾರ ಪ್ರಸ್ತಾಪ ಮಾಡಲು ಎಲ್ಲರೂ ಸ್ವತಂತ್ರರು. ಸಿಎಂ ಯಾರು ಎಂದು ಈಗ ಹೇಳುವುದು ಕಷ್ಟ. ಪಕ್ಷ ವ್ಯಕ್ತಿಗಳ ವಿಷಯ ಬರಲ್ಲ. ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡಿ ಎಂದು ನಾವು ಹೇಳುತ್ತೇವೆ. ಸಿದ್ದರಾಮೋತ್ಸವದಿಂದ ಪಕ್ಷಕ್ಕೆ ಶಕ್ತಿ ಬರಲಿದೆ. ಗೊಂದಲದ ಪ್ರಶ್ನೆ ಇಲ್ಲ ಎಂದು ಹೇಳಿದ್ರು.
ಇದನ್ನೂ ಓದಿ :- ಯತ್ನಾಳ್ ಎರಡೂವರೆ ಸಾವಿರ ಕೋಟಿ ಕೊಟ್ರೆ ಸಿಎಂ ಮಾಡ್ತಾರೆ ಅಂದ್ರು ಅದು ಶಿಸ್ತಾ…? – ಬಿಜೆಪಿ ಗೆ ಸಿದ್ದರಾಮಯ್ಯ ಪ್ರಶ್ನೆ