ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi murmu) ಬ್ರಿಟನ್ ರಾಣಿ ಎಲಿಜಬೆತ್ 2 ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಸರ್ಕಾರದ ಪರವಾಗಿ ಅಧಿಕೃತವಾಗಿ ಕ್ವೀನ್ ಎಲಿಜಬೆತ್ 2 ಅವರ ಅಂತ್ಯಕ್ರಿಯೆಯಲ್ಲಿ (Queen Elizabeth Funeral) ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 17ರಂದು ಲಂಡನ್ ಗೆ (London) ಭೇಟಿ ನೀಡಲಿರುವ ಅವರು ಸೆಪ್ಟೆಂಬರ್ 19ರಂದು ಕ್ವೀನ್ ಎಲಿಜಬೆತ್ 2 ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಟನ್ನ ರಾಣಿ ಎಲಿಜಬೆತ್ II ಅವರು ನವೆಂಬರ್ 13, 2015 ರಂದು ಲಂಡನ್ನಲ್ಲಿರುವ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ : – ಮಳೆ ಹಾನಿ ಪರಿಶೀಲನೆ- ಕೇಂದ್ರ ತಂಡ ‘ಬಂದ ಪುಟ್ಟ ಹೋದ ಪುಟ್ಟ’- ಕುಮಾರಸ್ವಾಮಿ
ಕೆಮಿಲ್ಲಾ ಮುಡಿಗೆ ಕೊಹಿನೂರ್ ಕಿರೀಟ
800 ವರ್ಷಗಳ ಭಾರತದ ಇತಿಹಾಸ ಹೊಂದಿರುವ ಕೊಹಿನೂರು ವಜ್ರ (Kohinoor diamond) 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ ಸೇರಿತ್ತು. ಈ ಬೆಲೆಬಾಳುವ ವಜ್ರ ಇಲ್ಲಿಯವರೆಗೂ ರಾಣಿ ಎಲಿಜಬೆತ್ 2ರ ಬಳಿ ಇತ್ತು. ಬ್ರಿಟನ್ ರಾಣಿ ಎಲಿಜಬೆತ್ II ರ ಮರಣದ ನಂತರ ರಾಜಮನೆತನದ ಜವಾಬ್ದಾರಿ ಚಾರ್ಲ್ಸ್ಗೆ ವರ್ಗಾವಣೆಯಾಗಿದೆ.
ರಾಜಕುಮಾರ ಚಾರ್ಲ್ಸ್ ಪತ್ನಿ, ಡಚೆಸ್ ಆಫ್ ಕಾರ್ನ್ವಾಲ್ ಕೆಮಿಲ್ಲಾ (Duchess of cornwall kemilla) , ಕ್ವೀನ್ ಕನ್ಸಾರ್ಟ್ ಎಂಬ ಬಿರುದು ಪಡೆದಿದ್ದಾರೆ. ಅದರ ಅರ್ಥ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಬ್ರಿಟನ್ನಿನ ರಾಣಿ ಆಗಲಿದ್ದು ಪ್ರತಿಷ್ಠಿತ ಕೊಹಿನೂರ್ ಕಿರೀಟ ಕೂಡ ಕೆಮಿಲ್ಲಾ ಮುಡಿಗೇರಲಿದೆ.
ಇದನ್ನೂ ಓದಿ : – ಲೋಬೋ, ದಿಗಂಬರ್ ಕಾಮತ್ ಸೇರಿ 8 ಮಂದಿ ಗೋವಾ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ