ರಮೇಶ್ ಜಾರಕಿಹೊಳಿ ( RAMESH JARAKIHOLI ) ಹಾಗೂ ಕೆ. ಎಸ್ ಈಶ್ವರಪ್ಪಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ದೆಹಲಿ ಭೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( BASAVARAJ BOMMAI ) ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸದನಕ್ಕೆ ಗೈರು ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಹಜವಾಗಿ ತಮ್ಮ ಕೇಸ್ಗಳು ಮುಕ್ತವಾದ ಮೇಲೆ, ಮತ್ತೊಮ್ಮೆ ಸಚಿವ ಸಂಪುಟ ಸೇರಬೇಕು. ಈ ವಿಚಾರವನ್ನು ಮೊನ್ನೆ ದೆಹಲಿಗೆ ಹೋದಾಗ ಪ್ರಸ್ತಾವನೆ ಮಾಡಿದ್ದೇನೆ. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರ ಸಂಪರ್ಕದಲ್ಲಿ ಇದ್ದೀನಿ ಎಂದು ತಿಳಿಸಿದ್ರು. ಇದನ್ನು ಓದಿ :- ಡಿ.29ರಂದು ಬೆಂಗಳೂರಿನಲ್ಲಿ ಆಟೋ ಸಿಗಲ್ಲ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರಿಂದ ಮುಷ್ಕರ
ಡಿಕೆ ಶಿವಕುಮಾರ್ ( D.K SHIVKUMAR ) ಮೇಲೆ ಸಿಬಿಐ ದಾಳಿ ವಿಚಾರವಾಗಿ ಮಾತನಾಡಿ, ಸಿಬಿಐ ಒಂದು ಸಂವಿಧಾನಿಕ ಸಂಸ್ಥೆ. ಸಿಬಿಐ ಮುಂದೆ ಯಾವ ಕೇಸ್ ಇದೆ ಎಂದು ಶಿವಕುಮಾರ್ ಅವರಿಗೆ ಗೊತ್ತಿದ್ದ ವಿಚಾರ ಎಂದರು. ಪಂಚಮಸಾಲಿ ಮೀಸಲಾತಿ ವಿಚಾರವಾಗಿ, ಸರ್ಕಾರ ಹಿಂದುಳಿದ ಆಯೋಗಕ್ಕೆ ಸೂಕ್ತವಾಗಿ ವರದಿ ಮಂಡಿಸುವಂತೆ ಸೂಚನೆ ಕೊಟ್ಟಿದೆ. ಆ ವರದಿ ಬಂದ ಬಳಿಕ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು.
ಇದನ್ನು ಓದಿ :- ನಾಳೆ ಸಭಾಪತಿ ಚುನಾವಣೆ ಹಿನ್ನೆಲೆ – ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ