ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಕುಮಾರ್ “ಶಕುನಿ” ಪಾತ್ರ – ಕೆ.ಎಚ್.ಮುನಿಯಪ್ಪ

ನಾನು ಕಾಂಗ್ರೆಸ್ (CONFRESS ) ಪಕ್ಷ ಬಿಟ್ಟು ಯಾವ ಪಕ್ಷಕ್ಕೂ ಸೇರೋದು ಇಲ್ಲ ಹೋಗೋದು ಇಲ್ಲ. ಕೋಲಾರ(KOLARA) ದಲ್ಲಿ 30 ವರ್ಷ ನನ್ನನ್ನು ಬೆಳೆಸಿದ ಮುಖಂಡರು,ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಕೋಲಾರ ನಗರದ ತಮ್ಮನಿವಾಸದ ಬಳಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನಾನು ಸೋತ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಮೇಶ್ ಕುಮಾರ್ (RAMESH KUMAR) ಕಾಂಗ್ರೆಸ್ ಪಕ್ಷದಲ್ಲಿ ನಾವಿರಬೇಕಾ ಅಥವಾ ಕೆ.ಎಚ್.ಮುನಿಯಪ್ಪ (K.H MUNIYAPPA) ಇರಬೇಕಾ ಅಂತಾ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಕುನಿ ಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಗೆ ಮುಂದೆ ಉತ್ತರ ಸಿಗಲಿದೆ. ಜಿಲ್ಲೆಯ ಎಲ್ಲಾ ಶಾಸಕರಿಗೆ ಮಾಟ- ಮಂತ್ರ ರಮೇಶ್ ಕುಮಾರ್ ಮಾಡಿಸಿದ್ದಾರೆ. ಇದನ್ನೂ ಓದಿ : –  ಕೈ ಬಿಟ್ಟು ತೆನೆ ಹೊರಲು ಸಜ್ಜಾಗುತ್ತಿದ್ದಾರಾ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ?

ಜಿಲ್ಲೆಯಲ್ಲಿ ಯಾರು ಮಂತ್ರಿ ಆಗಬಾರದು ಎಂಬ ನಿಟ್ಟಿನಲ್ಲಿ ರಮೇಶ್ ಕುಮಾರ್ ಶಕುನಿ ಪಾತ್ರವಹಿಸಿದ್ದಾರೆ. ಪಾಂಡವರ ವಾನವಾಸ ಮುಗಿದಿದೆ. ಯುದ್ದ ಆರಂಭವಾಗಲಿದೆ. ಶಕುನಿ,ದುರ್ಯೋಧನ, ಎಲ್ಲಾರೂ ಅಂತ್ಯವಾಗಲಿದ್ದಾರೆ. ಏಕಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಗೆ ಮುಂದೆ ಜನ್ರು ಉತ್ತರ ಕೊಡುತ್ತಾರೆ. ರಮೇಶ್ ಕುಮಾರ್ ಮಾತಿಗೆ ಎಲ್ಲರೂ ಮೂರ್ಖರಾಗಿದ್ದಾರೆ. ಯುದ್ದದಲ್ಲಿ ಕೃಷ್ಣನ ಸಹಕಾರದಿಂದ ಪಾಂಡವರು ಗೆದ್ದಿದ್ದಾರೆ. ನಾನು ಹೈಕಮಾಂಡ್ ಬಳಿ ಅಪಾಯಿಂಟ್ ಮೆಂಟ್ ಪಡೆದಿಕೊಂಡಿಲ್ಲ. ಎಲ್ಲ ಸಮಯ ನಿರ್ಣಯ ಮಾಡಲಿದೆ. ನಾವು ಶಾಂತವಾಗಿರೋಣ. ವಿಪಕ್ಷ ನಾಯಕ ಸಿದ್ದರಾಮಯ್ಯ,(SIDDARAMAIAH) ಡಿಕೆ ಶಿವಕುಮಾರ್ (D.K SHIVKUMAR) ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ನೋಡೋಣ.

ನನ್ನ ಬಿಟ್ಟು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವ ಬಗ್ಗೆ ಜನ್ರಿಗೆ ತಿಳಿಸಬೇಕು. ಇವರನ್ನು ಸೇರಿಸಿಕೊಳ್ಳುವ ಬಗ್ಗೆ ವಿರೋಧ ಇದೆ. ಸುಧಾಕಾರ್ ಮತ್ತು ಕೊತ್ತೂರು ಮಂಜುನಾಥ್ ಅವರು ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ನಡೆದುಕೊಂಡಿದ್ದರೆ ಜನ್ರಿಗೆ ಗೊತ್ತು. ಒಂದು ತಿಂಗಳು ಕಾಲಾವಕಾಶ ಕೊಡುವೆ ಅವರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡುವೆ ಎಂದು ತಿಳಿಸಿದ್ರು.

ಇದನ್ನೂ ಓದಿ : – ರಾಜ್ಯದಲ್ಲಿ ಜುಲೈ 5ರವರೆಗೆ ಭಾರೀ ಮಳೆ – ಬೆಂಗಳೂರಿನಲ್ಲೂ 3 ದಿನ ಯೆಲ್ಲೋ ಅಲರ್ಟ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!