ಆರ್ ಆರ್ ನಗರ (RR.Nagar) ದಲ್ಲಿ ಅಕ್ರಮ ಮತ ಸೇರ್ಪಡೆಯ ವಿರುದ್ಧ ಸಂಸದ ಡಿ.ಕೆ ಸುರೇಶ್ (Dk.Suresh) ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಜರಾಜೇಶ್ವರಿ ನಗರ (Rajarajeshwari nagar) ದ ಹಾಲಿ ಶಾಸಕ ಮುನಿರತ್ನ (Muniratna) ವಿರುದ್ಧ ದೂರು ನೀಡಿದ್ದಾರೆ. ಕಾಂಗ್ರೆಸ್ ಪ್ರಾಬಲ್ಯವಿರುವ ವಾರ್ಡ್ ಗಳಲ್ಲಿ ಮತದಾರರ ಪಟ್ಟಿ ಡಿಲೀಟ್ ಮಾಡಿರುವ ಆರೋಪ ಮಾಡಿದ್ದಾರೆ.
ಆಂಧ್ರ (Andhra) ಮೂಲದ ಜನರನ್ನು ಅಕ್ರಮವಾಗಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 30 ಸಾವಿರ ಜನರ ಅಕ್ರಮ ಸೇರ್ಪಡೆಯ ವಿರುದ್ಧ ಆರೋಪ ಮಾಡಿದ್ದಾರೆ. ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಿರಿಯ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದಾರೆ. ಬಿಬಿಎಂಪಿ ಚುನಾವಣಾ ಆಯುಕ್ತ ಉಜ್ವಲ್ ಕುಮಾರ್ ಮತ್ತು ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಜೊತೆ ಸಭೆ ನಡೆಸಿದ್ದಾರೆ. ಬಿಜೆಪಿ ಪರ ವೋಟ್ ಮಾಡಲು ಆಂಧ್ರ ಜನರ ಹೆಸರು ಸೇರ್ಪಡೆ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. 40 ಸಾವಿರಕ್ಕೂ ಹೆಚ್ಚು ಜನರ ಹೆಸರು ಸೇರ್ಪಡೆಯಾಗಿರುವ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ಚಿಲುಮೆ ಸಂಸ್ಥೆಯನ್ನು ಇಟ್ಕೊಂಡು ಬಿಜೆಪಿ ಮಂತ್ರಿಗಳು ಮತ್ತು ಶಾಸಕರು ಮತಗಳ ಗೋಲ್ಮಾಲ್ ಮಾಡಿರೋದು ಗೊತ್ತಾಗಿದೆ. 2021 ರಲ್ಲಿ 90 ಸಾವಿರ ಹೊಸ ಮತಗಳ ಹೊಸ ಸೇರ್ಪಡೆ ಮಾಡಿದ್ದಾರೆ. ಮೂರು ವರ್ಷದಲ್ಲಿ 1ಲಕ್ಷ 30 ಸಾವಿರ ಮತಗಳ ಸೇರ್ಪಡೆಯಾಗಿವೆ. 46 ಸಾವಿರ ಕಾಂಗ್ರೆಸ್ ಮತಗಳನ್ನ ಡಿಲೀಟ್ ಮಾಡಿದ್ದಾರೆ. 26 ಸಾವಿರ ಮತಗಳನ್ನು ಬಿ ಬಿ ಎಂ ಪಿ ಚುನಾವಣೆ ಆಯೋಗ ಡಿಲೀಟ್ ಮಾಡಿದೆ. ಫಾರಂ 6 ಮತ್ತು 7 ಪಡೆಯದೇ ಮತದಾರರ ಮಾಹಿತಿ ಡಿಲೀಟ್ ಮಾಡಿದ್ದಾರೆ. ಕಳೆದ 10 ದಿನಗಳಿಂದ ನಾವು ಬೂತ್ ಸಮೀಕ್ಷೆ ಮಾಡಿದ್ದೇವೆ. ಖಾಲಿ ನಿವೇಶನಕ್ಕೆ 46 ಮತಗಳನ್ನು ಸೇರ್ಪಡೆ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಬೆಂಬಲಿತ ಕುಟುಂಬಗಳ ಮಾಹಿತಿ ಡಿಲೀಟ್ ಮಾಡ್ತಾ ಇದ್ದಾರೆ. ಒಕ್ಕಲಿಗ ಮನೆಗಳನ್ನು ಗುರುತಿಸಿ ಆ ಮನೆಯ ಮತಗಳ ಡಿಲೀಟ್ ಮಾಡಿದ್ದಾರೆ. ಇದನ್ನು ಓದಿ : – ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ – ಸಿಎಂ ಬೊಮ್ಮಾಯಿ ಗಂಭೀರ ಆರೋಪ..!
ಅರ್ಜಿ ಪಡೆಯದೇ ಎಲ್ಲಾ ಅಕ್ರಮಗಳನ್ನು ಮಾಡಿದ್ದಾರೆ. ಬಿಜೆಪಿಯವರು ಸಂಪೂರ್ಣ ಅಧಿಕಾರ ದುರುಪಯೋಗ ಮಾಡಿದ್ದಾರೆ. ನಾವು ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿ ಮಾಹಿತಿ ಕೇಳಿದ್ದೇವೆ. ನಾವು ಬೂತ್ ಲೇವೆಲ್ ಚುನಾವಣಾ ಅಧಿಕಾರಿಗಳ ಮಾಹಿತಿ ಕೇಳಿದ್ದೇವೆ. ಬಿಜೆಪಿಗೆ ಚುನಾವಣೆ ಗೆಲ್ಲಲು ಕರ್ನಾಟಕ ಬೇಕು ವೋಟರ್ಸ್ ಮಾತ್ರ ಆಂಧ್ರದವರು ಬೇಕು ಎಂದು ಡಿ.ಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ : – KGF ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ. ರಾವ್ ನಿಧನ