ಬಿಜೆಪಿ (BJP) ಯವರು ಜಾತಿ ಧರ್ಮದ ಮೇಲೆ ಮಾತ್ರ ರಾಜಕೀಯ ಮಾಡಿಕೊಂಡಿದ್ದಾರೆ. ಈವರೆಗೂ ಧರ್ಮ ಒಡೆಯುತ್ತಿದ್ದರು ಈಗ ಜಾತಿ ಒಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ (Madhu bangarappa) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯ ಕೆಟ್ಟ ನೀತಿಯಿಂದ ರೈತರಿಗೆ ಜಿ.ಎಸ್.ಟಿ ಹಾಕ್ತಿದ್ದಾರೆ.
ಸಬ್ಸಿಡಿ ಇರೋ ಸೌಲಭ್ಯಗಳನ್ನು ನಿಲ್ಲಿಸಿದ್ದಾರೆ. ಎಲ್ಲಾ ಖರ್ಚು ಜಾಸ್ತಿಯಾಗ್ತಿದೆ ಬೆಂಬಲ ಬೆಲೆ ಮಾತ್ರ ಕೊಡ್ತಿಲ್ಲ. ಖಾಸಗೀಕರಣ ಬಿಲ್ ಪಾಸ್ ಮಾಡಿದರು. ಉಚಿತ ವಿದ್ಯುತ್ (Electricity) ಗೆ ಮುಂದೆ ಮೀಟರ್ ಕೂರಿಸ್ತಾರೆ. ಉಚಿತ ಭಾಗ್ಯಗಳನ್ನ ಸಂಪೂರ್ಣ ನಿಲ್ಲಿಸಿದ್ದಾರೆ. ಜಾತಿ ಧರ್ಮದ ಮೇಲೆ ರಾಜಕಾರಣ ಮಾಡ್ತಿದ್ದಾರೆ. ಇಷ್ಟು ದಿನ ಧರ್ಮ ಒಡೆಯುತ್ತಿದ್ದರು, ಈಗ ರೈತರನ್ನ ಒಡೆಯುತ್ತಿದ್ದಾರೆ ಎಂದು ಆರೋಪಿಸಿದ್ರು. ಭತ್ತ ಬೆಳೆಗಾರರಿಗೆ 500 ರೂ.ಸಹಾಯಧನ ಕೊಡ್ತಿದ್ದಾರೆ. ದಕ್ಷಿಣ ಕರ್ನಾಟಕದ ರೈತರಿಗೆ ಮಾತ್ರ ಕೊಟ್ಟು ಉತ್ತರ ಕರ್ನಾಟಕದ ಭಾಗದ ರೈತರಿಗೆ ಕೊಡ್ತಿಲ್ಲ. ದೇಶದ ಎಲ್ಲಾ ರೈತರ ವಿರುದ್ಧ ನೀತಿ ಅನುಸರಿಸ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯ ಪ್ರಣಾಳಿಕೆ ಇರುತ್ತೆ. ಲೋಕಲ್ ಪ್ರಣಾಳಿಕೆ ಬೇರೆ ಇರುತ್ತದೆ. ಆಯಾಭಾಗದ ಅನುಗುಣವಾಗಿ ಪ್ರಣಾಳಿಕೆ ತಯಾರು ಮಾಡ್ತಿದ್ದಾರೆ. ಅವರ ಸಮಾವೇಶ ನೋಡಿದರೆ ಅವರು ಛೀದ್ರವಾಗಿದ್ದಾರಾ ಇಲ್ಲ ನಾವಾಗಿದ್ದೀವಾ ನೀವೇ ನೋಡಿ ಎಂದು ಹೇಳಿದ್ರು. ಭ್ರಷ್ಟಾಚಾರ ಹಣ ನೀಡಿ ಜನರಿಗೆ ಬಿರಿಯಾನಿ ತಿನ್ನಿಸಿದರೂ ಬಿಜೆಪಿ ಸಮಾವೇಶದಲ್ಲಿ ಖಾಲಿ ಚೇರೇ ಕಾಣಿಸುತ್ತಿವೆ. ಶೇ 80 ರಷ್ಟು ಭ್ರಷ್ಟಾಚಾರ ಮಾಡಿದ ಹಣದಲ್ಲಿ ಸಮಾವೇಶ ಮಾಡ್ತಿದ್ದಾರೆ. ಮೋದಿ ಬಂದಾಗ ಜನರನ್ನ ಕರೆದು ಹಣ ಕೊಡಲಿಲ್ಲ. ಗ್ಯಾಸ್ ಸಿಲಿಂಡರ್ ಗೆ ಹಿಂದೆ 300-400 ರೂ ಇತ್ತು ಈಗ 1200 ವರೆಗೂ ಆಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅರ್ಥಪೂರ್ಣ ಪ್ರಣಾಳಿಕೆ ನಿರ್ಮಾಣ ಮಾಡ್ತೇವೆ. ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ತೆಗೆದುಕೊಳ್ಳಲು 371 ಆರ್ಟಿಕಲ್ ಮಾಡಿದ್ದು. ಗೆಲ್ಲುವ ವ್ಯಕ್ತಿಗೆ ಟಿಕೆಟ್ ಕೊಡಬೇಕು ಸಮುದಾಯ ಮುಖ್ಯ ಅಲ್ಲ. ಓಬಿಸಿಯಲ್ಲಿರುವ ಒಳ್ಳೆಯರವನ್ನ ಗುರ್ತಿಸಿ ಅಂತ ಕೇಳ್ತೇವೆ. ಸರ್ಕಾರ ಬರಬೇಕು ಆಡಳಿತ ನಡೆಸಬೇಕಾದರೆ ಗೆಲ್ಲುವ ವ್ಯಕ್ತಿಗೆ ಟಿಕೆಟ್ ಕೊಡಲೇಬೇಕು . ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ ಅವರ ತೀರ್ಮಾನಕ್ಕೆ ಬದ್ಧರಾಗ್ತೇವೆ. ಓಬಿಸಿಯವರಿಗೆ ಹೆಚ್ಚು ಟಿಕೆಟ್ ಕೊಡಿ ಅಂತ ಕೇಳೇ ಕೇಳ್ತೀವಿ ಎಂದು ಹೇಳಿದರು. ಇದನ್ನು ಓದಿ : – ಅರುಣಾಚಲ ಪ್ರದೇಶದಲ್ಲಿ ಯುದ್ಧ ವಿಮಾನ ಗಸ್ತು ನಡೆಸುತ್ತಿರುವ ಭಾರತೀಯ ವಾಯುಪಡೆ
ಇದೇ ವೇಳೆ ಸಿದ್ರಾಮುಲ್ಲಾಖಾನ್ ಅಂದ್ರೆ ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತೆ. ಸಿದ್ದರಾಮಯ್ಯ (Siddaramaiah) ಸಾಮಾಜಿಕ ನ್ಯಾಯದ ಹೆಜ್ಜೆ ಇಟ್ಟಿದ್ದಾರೆ ಹೊರತು ಧರ್ಮ ಒಡೆದಿಲ್ಲ. ಬಿಜೆಪಿಯವ್ರು ಸಿಬಿಐಯನ್ನೇ ನಂಬಲ್ಲ ಅಂದ್ರೆ ಮೋದಿ (Modi) ಯವರನ್ನೇ ನಂಬಲ್ಲ ಅಂತ ಅರ್ಥ ಎಂದು ಹೇಳಿದ್ರು. ಸಿದ್ಧರಾಮಯ್ಯ ಹಾಗೂ ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಪಾಠ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಮಲ್ಲಿಕಾರ್ಜುನ ಖರ್ಗೆ ಹೆಡ್ ಆಫ್ ದಿ ಫ್ಯಾಮಿಲಿ. ಕಾರ್ಯಕರ್ತರಿಗೆ ಗೊಂದಲ ಆಗಬಾರದು ಅಂತ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಿದ್ದಾರೆ. ರಾಜ್ಯ ನಾಯಕರಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದೆ ಅಂತಾ ನಾನು ಒಪ್ಪಿಕೊಳ್ಳಲ್ಲ. ನಮ್ಮ ಪಕ್ಷದಲ್ಲಿ ಚುನಾವಣೆಯಲ್ಲಿ 224 ಕ್ಷೇತ್ರದಲ್ಲೂ ಟಿಕೆಟ್ ಒಳ್ಳೆಯವರಿಗೆ ಕೊಡ್ತಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇದನ್ನು ಓದಿ : – ತವಾಂಗ್ ಸಂಘರ್ಷದಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿಲ್ಲ, ಗಂಭೀರ ಗಾಯಗಳೂ ಆಗಿಲ್ಲ, ರಾಜನಾಥ್ ಸಿಂಗ್