ಸಿದ್ದರಾಮಯ್ಯ ನೀವೂ ಡೋಂಗಿ ರಾಜಕಾರಣಿ – ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

ನಾನು ರಾಜ್ಯಾಧ್ಯಕ್ಷ ನಾಗಿ 3 ವರ್ಷ ಕಳೆದಿದೆ. ಈ ದೇಶದಲ್ಲಿ ವಿಶಿಷ್ಟ ಸಂಸ್ಕೃತಿ, ಭಾರತ ಸರ್ವಶ್ರೇಷ್ಠ ನೆಲ. ಕೃಷಿ (agriculture ) ಋಷಿ ಸಂಸ್ಕೃತಿಯ ಪೂಜ್ಯನೀಯ ನೆಲ. ಚರಾಚರ ಜೀವಿಯಲ್ಲಿ ದೇವರನ್ನು ಕಂಡಿದ್ದೇವೆ.

ಹಾಗಾಗಿ ಗೋವಿನಲ್ಲೂ ದೇವರನ್ನು ಕಂಡಿದ್ದೇವೆ ಎಂದು ನಳೀನ್‌ ಕುಮಾರ್ ಕಟೀಲ್ ( Nalin kumar kateel) ಹೇಳಿದ್ದಾರೆ. ತುಮಕೂರಿನ ( tumakuru ) ಬಿಜೆಪಿ( bjp ) ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಕೃಷಿ ಸಂಸ್ಕೃತಿ ಋಷಿ ಸಂಸ್ಕೃತಿಯಂತೆ ಶ್ರೇಷ್ಠ. ಕುವೆಂಪು ರೈತರ ಬಗ್ಗೆ ವಿಶಿಷ್ಟ ವಿಭಿನ್ನವಾಗಿ ಹೇಳಿದ್ದಾರೆ. ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ಯಡಿಯೂರಪ್ಪ ಸರ್ಕಾರ. ಕಾಂಗ್ರೆಸ್ ರೈತರು ದೇಶದ ಬೆನ್ನೆಲೆಬು ಎಂದರು. ಆದರೆ ರೈತರ ಬೆನ್ನಿಗೆ ನಿಂತಿಲ್ಲ. ಆದರೆ ಮೋದಿ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ ಮೂಲಕ ರೈತರ ಬೆನ್ನಿಗೆ ನಿಂತಿದೆ. ಯಡಿಯೂರಪ್ಪ ನವರಿಗೆ ರೈತರ ಮಗ ಎನ್ನುತ್ತಾರೆ. 20 ಸಾವಿರ ಕೋಟಿ ರೂ ಇರುವ ರೈತರ ಬಜೆಟ್‌ ನ್ನು ಮೋದಿ ಸರ್ಕಾರ 1.20 ಲಕ್ಷ ಕೋಟಿ ರೂ ಗೆ ಏರಿಸಿದ್ದಾರೆ. ರೈತರ ಶಾಪ ಕಾಂಗ್ರೆಸ್ ಗೆ ತಟ್ಟಿದೆ.

ಹಾಗಾಗಿ ಅನೇಕ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಸಿದ್ದರಾಮಯ್ಯ ( Siddaramaiah ) ಸಿಎಂ ಆಗಿದ್ದಾಗ ೩ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಅತಿ ಹೆಚ್ವು ಗೋಹತ್ಯೆ ನಡೆದಿದ್ದು ಸಿದ್ದರಾಮಯ್ಯ ಕಾಲದಲ್ಲಿ. ವೋಟ್ ಬ್ಯಾಂಕ್ಗಾಗಿ ಸಿದ್ದರಾಮಯ್ಯ ಗೋ ರಕ್ಷಣೆ ಮಾಡುವ ಬದಲು ಗೋ ಹಂತಕರನ್ನು ರಕ್ಷಣೆ ಮಾಡಿದರು. ಟಿಪ್ಪು ಜಯಂತಿ ಬಗ್ಗೆ ಯೋಚನೆ ಮಾಡಿದರು ಸಮಾಜವನ್ನು ಒಡೆದರು. ಆದರೆ ರೈತರ ಬದುಕು ಹಸನು ಮಾಡುವ ಬಗೆ ಯೋಚನೆ ಮಾಡಿಲ್ಲ. ಆರ್ ಎಸ್ ಎಸ್ ಬಗ್ಗೆ ಮಾತಾಡುತ್ತಾರೆ ಸಿದ್ದರಾಮಯ್ಯ. ಆದರೆ ಕಾಂಗ್ರೆಸ್ ದೇಶವನ್ನು ಮಾರಾಟ ಮಾಡಿದೆ. ಈ ದೇಶವನ್ನು ರಕ್ಷಣೆ ಮಾಡಿದ್ದು ಆರ್ ಎಸ್ ಎಸ್. ಸೋನಿಯಾ ಗಾಂಧಿ, ಡಿಕೆಶಿ ಬೇಲ್ ನಲ್ಲಿ ಇದ್ದಾರೆ. ಕಾಂಗ್ರೆಸ್ ಕಳ್ಳರ ಸಂಘ ನಿಮ್ಮದು. ಆರ್ಎಸ್ ಎಸ್ ಪದ ಹೇಳುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಸಮಾಜವಾದಿ ಅಂತಾರೆ, ಆದರೆ ಸಮಾಜವಾದಿ ಅಲ್ಲ ನೀವು ಮಜಾವಾದಿ. ಆರ್ ಎಸ್ ಎಸ್ ರಾಜಕಾರಣ ಮಾಡಲ್ಲ. ರಾಷ್ಟ್ರ ನಿರ್ಮಾಣ ಮಾಡುತ್ತೆ. ಇದನ್ನೂ ಓದಿ : –  ಯುನಿಕಾರ್ನ್ ಮೂಲಕ 25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹ – ಮೋದಿ

ಸಿದ್ದರಾಮಯ್ಯ ನೀವು ಡೋಂಗಿ ರಾಜಕಾರಣಿ. ಸಿದ್ದರಾಮಯ್ಯ ನಿಂದ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತಿದೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದಲಿತ ಎಂಬ ಕಾರಣಕ್ಕೆ ಡಾ.ಜಿ.ಪರಮೇಶ್ವರನ್ನು ಸಿಎಂ ಮಾಡಲು ಬಿಟ್ಟಿಲ್ಲ. ಡಿಕೆಶಿ ರಾಜಕೀಯ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈಗಾಗಲೇ ಮತ್ತೇ ಸಿಎಂ ಆಗಲು ಟವೆಲ್ ಹಾಕಿದ್ದಾರೆ. ಸಿದ್ದರಾಮಯ್ಯ ನೀವೆಂದು ಮತ್ತೇ ಸಿಎಂ ಆಗಲ್ಲ. ಸಿದ್ದರಾಮಯ್ಯ ನಿಮ್ಮ ಹೆಸರು ರಾಮಂದು ಮುಖ, ಮನಸ್ಸು ಎಲ್ಲವೂ ರಾವಣಂದು. ಕುರುಬರ ಸಮುದಾಯಕ್ಕೆ ಅನ್ಯಾಯ ಮಾಡಿದ್ರಿ. ರೈತರ ಶಾಪ ಸಿದ್ದರಾಮಯ್ಯ ನಿಗೆ ಇದೆ. ಹಾಗಾಗಿ ಎಂದೂ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು. ಇದನ್ನೂ ಓದಿ : – ಮೈ‌ ನರೇಂದ್ರ ಮೋದಿ ಹುಂ ಅಂತ ಹೇಳ್ತಾರಲ್ಲಾ ಅದೊಂದೇ ಅವರು ಹೇಳಿದ ಸತ್ಯ – ಸಲೀಂ ಅಹ್ಮದ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!