ದೇಶದ ಇತಿಹಾಸವೆಂದರೆ ಅದು ಕಾಂಗ್ರೆಸ್ (Congress) ನ ಇತಿಹಾಸ. ಯಾರೂ ಕೂಡ ಇದನ್ನ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK.Shivakumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸುಭಾಷ್ ಚಂದ್ರ ಬೋಸ್ , ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಸೋನಿಯಾಗಾಂಧಿ (Sonia gandhi) ಕುಳಿತಿದ್ದ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಕುಳಿತಿದ್ದಾರೆ .
ಕುಗ್ರಾಮದಿಂದ ಬಂದು ದೆಹಲಿವರೆಗೂ ಬೆಳೆದಿದ್ದಾರೆ. ಕಳೆದ 1985 ರಿಂದ ಅವರನ್ನ ಹತ್ತಿರದಿಂದ ಬಲ್ಲೆ ಎಂದು ಹೇಳಿದ್ರು. ಮೂರು ದಶಕದಿಂದ ಅವರ ಜೊತೆ ಕೆಲಸ ಮಾಡಿದ್ದೇನೆ. ಎಷ್ಟೇ ನೋವಾದರೂ ಎಂದೂ ಮಾಧ್ಯಮಗಳ ಮುಂದೆ ಬಂದವರಲ್ಲ. ಪ್ರಾಮಾಣಿಕತೆ, ನಿಷ್ಠೆಯಿಂದಾಗಿ ಅವರಿಗೆ ಈ ಸ್ಥಾನ ಲಭಿಸಿದೆ. ತ್ಯಾಗ, ಹೋರಾಟ, ಬಡವರ ಬಗ್ಗೆ ಚಿಂತನೆ ಹೊಂದಿದ್ದಾರೆ. ಸೋನಿಯಾಗಾಂಧಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 52 ವರ್ಷಗಳ ಬಳಿಕ ಅವಕಾಶ ಸಿಕ್ಕಿದೆ. ಕನ್ನಡಿಗರ ಪರವಾಗಿ ಕಾಂಗ್ರೆಸಿಗರ ಪರವಾಗಿ ಒಂದು ಕೋಟಿ ನಮಸ್ಕಾರ ಖರ್ಗೆಯವರಿಗೆ ಎಂದು ಹೇಳಿದ್ರು. ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಅವರ ಕೈಕೆಳಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸೋನಿಯಾ ಗಾಂಧಿ, ಆ ನನ್ನ ತಾಯಿ, ಅಧಿಕಾರವನ್ನು ತ್ಯಾಗ ಮಾಡಿದರು.
ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇದೆ ಅನ್ನೋದಕ್ಕೆ ಕರ್ನಾಟಕ ಕಾಂಗ್ರೆಸ್ ಸಾಕ್ಷಿ. ನನ್ನ ಎಲ್ಲರೂ ಕನಕಪುರ ಬಂಡೆ ಅಂತಾರೆ, ನಾನು ಬಂಡೆಯಲ್ಲ. ಮಲ್ಲಿಕಾರ್ಜುನ ಖರ್ಗೆ ಈ ದೇಶದ ಬಡವರ ಪರವಾಗಿ ಕೆಲಸ ಮಾಡುವ ಬಂಡೆ. ಸೋನಿಯಾ ಗಾಂಧಿಯವರೇ ಅವರನ್ನು Rock ಅಂತ ಕರೆದಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಜಿಂಬಾಬ್ವೆ ವಿರುದ್ಧ ಭಾರತಕ್ಕೆ 71 ರನ್ ಗಳ ಭರ್ಜರಿ ಜಯ