2023ರ ವಿಧಾನಸಭೆ ಚುನಾವಣೆ (Vidhanasabha election) ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod muthalik) ಹೇಳಿದ್ದಾರೆ. ಧಾರವಾಡ (Dharwad) ದಲ್ಲಿ ಮಾತನಾಡಿದ ಅವರು ಇದು ನನ್ನ ಕೊನೆಯ ಪ್ರಯತ್ನ. ರಾಜಕೀಯ ಶಕ್ತಿ ಇಲ್ಲದೆ ಹಿಂದುತ್ವ ವಿಚಾರವಾಗಲಿ ಜಾರಿಗೆ ತರಲು ಆಗೋದಿಲ್ಲ.
ಸಂಘಟನೆಗಳು ಹೋರಾಟ ಮಾಡಬಹುದು, ಆಂದೋಲನ ಮಾಡಬಹುದು .ಆದರೆ ಜಾರಿಗೆ ತರಲು ಆಗೋದಿಲ್ಲ. ರಾಜಕೀಯ ಶಕ್ತಿ ಇಲ್ಲದೆ ಏನೂ ಮಾಡಲು ಆಗೋದಿಲ್ಲ. ನಾನು 2014 ರಿಂದ ಬಿಜೆಪಿ ಮೂಲಕ ಪ್ರಯತ್ನ ಮಾಡಿದೆ. ಆದ್ರೆ ಬಿಜೆಪಿಯವರು ಸ್ಪಂದನೆ ಕೊಟ್ಟಿಲ್ಲ ಅವಮಾನ ಮಾಡಿದರು ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಬಿಜೆಪಿಯವರು ಬಂದ್ರು ನಾನು ಸ್ವೀಕಾರ ಮಾಡಿಕ್ಕೊಳ್ಳೋದಿಲ್ಲ. ಬಿಜೆಪಿ ಹಿಂದೂ ಕಾರ್ಯಕರ್ತರನ್ನ ಕಡೆಗಣಿಸುತ್ತಿದೆ. ಹಿಂದೂ ಸಂಘಟಕರ, ಹಿಂದೂ ಕಾರ್ಯಕರ್ತರ ಒತ್ತಾಯವಿದೆ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ್ರು. ನಾನು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದೆ ಗೆಲ್ಲುತ್ತೇನೆ. ನನ್ನ ಸ್ಫರ್ಧೆಗೆ ಬೆಳಗಾವಿ ಉತ್ತರ, ದಕ್ಷಿಣ, ಧಾರವಾಡ, ಉಡುಪಿ, ಪುತ್ತೂರು ,ಕಾರ್ಕಳ, ಶೃಂಗೇರಿ, ಜಮಖಂಡಿ ಇಷ್ಟು ಕ್ಷೇತ್ರಗಳಿಂದ ಒತ್ತಾಯವಿದೆ. ಡಿಸೆಂಬರ್ ಮೊದಲನೆಯ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಬಹಿರಂಗ ಪಡಿಸುತ್ತೇನೆ. ನಾನು ಆ ಮೂರು ಪಕ್ಷಗಳಿಂದ ನಿಲ್ಲಲ್ಲ. ನನ್ನ ಮನೆ ಬಾಗಿಲಿಗೆ ಯಾವ ಪಕ್ಷದವರು ಬರೋದು ಬೇಡ, ನಾನು ಅವರ ಮನೆ ಬಾಗಿಲಿಗೆ ಹೋಗಲ್ಲ. ಬಿಜೆಪಿಯವರು ನನಗೆ ಬಹಳ ಅನ್ಯಾಯ ಮಾಡಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : – AAP ಸಿಎಂ ಅಭ್ಯರ್ಥಿಯನ್ನು ನೀವೇ ಆರಿಸಿ – ಜನಾಭಿಪ್ರಾಯದ ಮೊರೆಹೋದ ಕೇಜ್ರಿವಾಲ್..!