SC, ST ಸಮಾಜಗಳು ಅನೇಕ ವರ್ಷಗಳಿಂದಲೂ ಮೀಸಲಾತಿಗಾಗಿ ಹೋರಾಟ ನಡೆಯುತ್ತಿವೆ. ಶೋಷಿತರ ಪರವಾನಗಿ ಹೋರಾಟ ಮಾಡಿದ್ದಾರೆ. ಹೋರಾಟಗಾರರಿಗೆ ಧನ್ಯವಾದಗಳು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand singh) ಹೇಳಿದ್ದಾರೆ. ವಿಜಯನಗರ (Vijayanagara) ದಲ್ಲಿ ಮಾತನಾಡಿದ ಅವರು ಈಗ ಮೀಸಲಾತಿ ನೀಡಲಾಗಿದೆ, ಶ್ರೀರಾಮುಲು ಕೂಡ ಅನೇಕ ಹೋರಾಟ ಮಾಡಿದ್ದಾರೆ .
ಅನೇಕ ಟೀಕೆಗಳನ್ನು ಎದುರಿಸಿದ್ದಾರೆ. ಶ್ರೀರಾಮುಲು (Sri ramulu) ವಿರುದ್ದ ಟೀಕೆ ಮಾಡೋವವರಿಗೆ ಉತ್ತರ ಸಿಕ್ಕಿದೆ. ಅಷ್ಟು ಸುಲಭವಾಗಿ ತೀರ್ಮಾನ ಮಾಡೋದಕ್ಕಾಗೋಲ್ಲಾ . ಮೀಸಲಾತಿ ಕೊಡಿಸುವುದರಲ್ಲಿ ಶ್ರೀರಾಮುಲು ಅವರದ್ದು ಸಿಂಹ ಪಾಲಿದೆ ಎಂದು ಹೇಳಿದ್ರು. ಪಕ್ಷಾತೀತವಾಗಿ ಹೋರಾಟ ಮಾಡಿದಾಗ ಮಾತ್ರ, ಹೋರಾಟ ಯಶಸ್ವಿಯಾಗುತ್ತದೆ. ನಾನು ಕೂಡ ಮೀಸಲಾತಿ ವಿಚಾರದಲ್ಲಿ ಸಿಎಂ ಮತ್ತು ಶ್ರೀ ರಾಮುಲು ಅವರಿಗೆ ಸಲಹೆ ನೀಡಿದ್ದೇನೆ. ರಾಜೂಗೌಡ ಅವರ ಪಾತ್ರವೂ ಬಹಳಷ್ಟಿದೆ. ವಾಲ್ಮೀಕಿ ಶ್ರೀಗಳ ಹಠದ ಜಯ ಇದಾಗಿದೆ ಎಂದು ಹೇಳಿದ್ರು. 242 ದಿನಗಳ ಕಾಲ ಧರಣಿ ಕೂತಿದ್ದು, ಸುಲಭದ ಮಾತಲ್ಲ . ಶ್ರೀಗಳು ಕಾನೂನು ಅರಿತಿದ್ದಾರೆ. ಶೇಡ್ಯೂಲ್ 9 ನಲ್ಲಿ ಸೇರಿಸೋದು ಕೂಡ ಒಪ್ಪಿಗೆ ನೀಡಿದ್ದೇವೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ, ಗೆಜೆಟ್ ಕೂಡ ಆಗುತ್ತದೆ .ಬೇರೆ ಸಮಾಜದಲ್ಲಿ ಕಡಿತ ಮಾಡದೇ, ಮೀಸಲಾತಿ ನೀಡಿದ್ದಾರೆ .ಇಂದು ಶುಭದಿನ ನಮಗೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ :- ತಮ್ಮನ್ನು ಹೊಗಳಿದ ಶಾಸಕ ರಾಜೂಗೌಡಗೆ ವೇದಿಕೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕ್ಲಾಸ್