ED ನೋಟೀಸ್ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (Dk.Shivkumar) ಪ್ರತಿಕ್ರಿಯೆ ನೀಡಿದ್ದಾರೆ. ಇಡಿಯವರು ಮತ್ತೆ ನೋಟೀಸ್ ಕೊಟ್ಟಿದ್ದಾರೆ . ಮೊದಲು ಒಮ್ಮೆ ಹೋಗಿ ರಿಪ್ಲೈ ಕೊಟ್ಟಿದ್ದೇವೆ. ಈಗ ತನಿಖಾಧಿಕಾರಿ ಚೇಂಜ್ ಆಗಿದ್ದಾರಂತೆ. ನನಗೆ ಮತ್ತು ನನ್ನ ಸಹೋದರನಿಗೆ ನೋಟೀಸ್ (Notice) ಬಂದಿದೆ. ಮೊದಲು ಕೆಲವು ದಾಖಲಾತಿಗಳನ್ನ ಕೇಳಿದ್ದರು.
ಇನ್ನು ಕೆಲವು ಡಾಕ್ಯುಮೆಂಟ್ ಗಳನ್ನು ಕಳಿಸುತ್ತೇವೆ ಎಂದು ಹೇಳಿದ್ರು. ಇಡಿ ಹಾಗೂ ಸಿಬಿಐ ಒಂದೇ ವಿಚಾರಕ್ಕೆ ಎರಡು ಕೇಸ್ ಫೈಲ್ ಮಾಡಿದ್ದಾರೆ. ಆ ರೀತಿ ಮಾಡಲು ಬರುವುದಿಲ್ಲ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದೇನೆ . EDಯವರು ಯಾಕೆ ಪದೇ ಪದೇ ಕರೆದು ಯಾಕೆ ಹಿಂಸೆ ಕೊಡುತ್ತಿದ್ದಾರೆ ಗೊತ್ತಿಲ್ಲ, ನೋಡೋಣ ಎಂದು ಹೇಳಿದರು.
ಕೋಲಾರ ಸೋಲಾರ್ ಪ್ರಾಜೆಕ್ಟ್ ಬಿಜೆಪಿ ಕ್ರೆಡಿಟ್ ಬಗ್ಗೆ ಡಿಕೆ ಶಿ ಪ್ರತಿಕ್ರಿಯೆ ನೀಡಿದ್ದಾರೆ. ಚರಿತ್ರೆಯನ್ನು ಯಾರು ಬದಲಾವಣೆ ಮಾಡಲು ಸಾಧ್ಯವಿಲ್ಲ. ನಾನೇನು ಕೆಲಸ ಮಾಡಿದ್ದೇನೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಇದನ್ನೂ ಓದಿ : – ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ..? – ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ
ನಾನು ಮಾಡಿರುವ ಕೆಲಸವನ್ನು ಕೇಂದ್ರ ಸರ್ಕಾರ ಗುರುತಿಸಿದೆ ಎಂದು ತಿಳಿಸಿದ್ರು. ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಎಂದು ಹೆಸರು ಬಂದಿದೆ. ಈ ಕೆಲಸಕ್ಕೆ ಪ್ರಧಾನಿ ಅವರೇ ನನಗೆ ಅವಾರ್ಡ್ ಕೊಟ್ಟಿದ್ದರು. ಬೇಕಾದರೆ ಫೋಟೋಗಳನ್ನು ನಾನು ರಿಲೀಸ್ ಮಾಡುತ್ತೇನೆ. ಸತ್ಯವನ್ನು ಮುಚ್ಚುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ತುಮಕೂರಲ್ಲಿ ಬಾಣಂತಿ ಅವಳಿ ಮಕ್ಕಳ ಸಾವು
ಈ ಘಟನೆ ಸರ್ಕಾರದ ವೈಫಲ್ಯ . ಸರ್ಕಾರಕ್ಕೆ ಮಾನವೀಯತೆ ಇಲ್ಲ . ಹಿಂದೆ ನಾನೊಮ್ಮೆ ಒಂದು ಮಾತನ್ನು ಹೇಳಿದ್ದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಡಿಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ…? ಜನತೆಗೆ ಸ್ವಲ್ಪ ವಿವರಿಸುವಿರಾ? – ಬಿಸಿ ನಾಗೇಶ್ ಪ್ರಶ್ನೆ