ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿ – ಕಾಂಗ್ರೆಸ್ ಗೆ ಶಾಸಕ ಬಂಡೆಪ್ಪ ಕಾಶೆಂಪೂರ್ ಮನವಿ

ರಾಜ್ಯಸಭಾ ಚುನಾವಣೆ (Rajya sabha election) ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ನ (Whitefield) ಹೊಟೇಲ್ ವಿವಂತಾದಲ್ಲಿ ಜೆಡಿಎಸ್ ಶಾಸಕರ ಒಂದು ಸುತ್ತಿನ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD.Kumaraswamy) ಸಭೆ ನಡೆಸಿ ಮತ್ತೊಂದು ಸುತ್ತಿನ ಸಭೆ ಗಾಗಿ ಯಶವಂತಪುರದ ತಾಜ್ ವಿವಂತ್ ಹೋಟೆಲ್ (Taj vivanta hotel) ನತ್ತ ತೆರಳಿದ್ದಾರೆ.

ಸಭೆ ಬಳಿಕ ಮಾತನಾಡಿದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪುರ್ (Bandeppa kashempur) ಕಾಂಗ್ರೆಸ್ (Congress) ನವರು ನಮಗೆ ಮೊದಲನೇ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಹೇಳಿದ್ರು. ಜೆಡಿಎಸ್ (JDS) ಪಕ್ಷದಿಂದ ಯಾವುದೇ ಅಡ್ಡಮತದಾನ ಆಗುವುದಿಲ್ಲ. ಬಿಜೆಪಿಯನ್ನು(BJP) ದೂರವಿಡುವ ಸಲುವಾಗಿ ಕಾಂಗ್ರೆಸ್ ನಮಗೆ ಮತ ನೀಡಬೇಕು. ಕಾಂಗ್ರೆಸ್ ನವರು ಈಗಾಗಲೇ ಒಂದು ಸದಸ್ಯ ಸ್ಥಾನವನ್ನು ಗೆಲ್ಲಲಿದ್ದಾರೆ. ನಮ್ಮಲ್ಲಿ ಯಾವುದೇ ಸ್ಥಾನ ಇಲ್ಲದೆ ಇರುವುದರಿಂದ ನಮಗೆ ಸಹಕಾರ ನೀಡಿ. ಅಂದಿನ ಪರಿಸ್ಥಿತಿಯಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು (HD. Deveowda) ಇದನ್ನು ಯಾವತ್ತೂ ಮರೆಯಬೇಡಿ ಎಂದು ಹೇಳಿದ್ರು. ಈಗಾಗಲೇ ಅರ್ಧದಷ್ಟು ಶಾಸಕರು ನಾವು ಜೊತೆಗಿದ್ದೇವೆ. ಸಂಜೆ ಹೊತ್ತಿಗೆ ಎಲ್ಲರೂ ಒಂದೆಡೆ ಸೇರುತ್ತವೆ. ಶಾಸಕರಾದ ಜಿಟಿ ದೇವೇಗೌಡ (GT.Degowda), ಶಿವಲಿಂಗೇಗೌಡ ಸೇರಿ ಎಲ್ಲರೂ ನಮಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಮಾಸ್ಕ್ ಧರಿಸದ ಪ್ರಯಾಣಿಕರನ್ನ ಮುಲಾಜಿಲ್ಲದೆ ಕೆಳಗಿಳಿಸಿ- ಡಿಜಿಸಿಎ ಖಡಕ್ ಎಚ್ಚರಿಕೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!