ಮಠಾಧೀಶರ ಪತ್ರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು – ಸರ್ಕಾರಕ್ಕೆ ಶೆಟ್ಟರ್ ಸಲಹೆ

ಪಠ್ಯಪುಸ್ತಕ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadish shetter) ಹುಬ್ಬಳ್ಳಿಯಲ್ಲಿ (Hubbali) ಪ್ರತಿಕ್ರಿಯಿಸಿದ್ದಾರೆ . ನಾಡಿನ ಮಠಾಧೀಶರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆಂದರೆ ಅದನ್ನ ಗಂಭೀರವಾಗಿ ಪರಿಗಣಿಸಬೇಕು.

ಪಠ್ಯದಲ್ಲಿ ಏನು ಲೋಪದೋಷವಾಗಿದೆ ಅದನ್ನ ಸರಿಪಡಿಸಬೇಕು ಇಲ್ಲವಾದ್ರೆ ಅದನ್ನ ತಿಳಿಸಿ ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸುಮ್ಮನೆ ವಿವಾದ ಮಾಡೋದು ಸರಿಯಲ್ಲ. ಕೆಲವರು ವಿಷಯ ಗೊತ್ತಿಲ್ಲದೇ ಮಾತನಾಡ್ತಾರೆ ನಾನೂ ಕೂಡಾ ಬಸವಣ್ಣನವರ (Basavanna) ಕುರಿತು ಪಠ್ಯದಲ್ಲಿ ಏನಾಗಿದೆ ಅನ್ನೋದು ನೋಡಿಲ್ಲ .ಇವಾಗ ಆ ಪ್ರತಿ ತರಿಸೋಕೆ ಹೇಳಿದ್ದೇನೆ .ಅದರಲ್ಲಿ ತಪ್ಪಾಗಿದ್ರೆ ಖಂಡಿತ ಅದನ್ನ ಸರಿಪಡಿಸಬೇಕು .ಈ ಬಗ್ಗೆ ನಾನೂ ಕೂಡಾ ಸಿಎಂಗೆ ಹೇಳ್ತೇನೆ .ಮಠಾಧೀಶರ ಪತ್ರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕಾಲಾನುಕ್ರಮೇಣ ಆಗಬೇಕು .ಅದು ಸಿಎಂ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು .ಯಾಕೆ ತಡವಾಗ್ತಿದೆ ನನಗೆ ಗೊತ್ತಿಲ್ಲ, ಸಿಎಂ ಅವರೇ ಹೇಳಬೇಕು ಎಂದು ಜಗದೀಶ ಶೆಟ್ಟರ್ ಹೇಳಿದ್ರು. ಇದನ್ನೂ ಓದಿ : – ಕುಣಿಗಲ್ ತಾಲೂಕಿನ ಅಭಿವೃದ್ಧಿ ಉದ್ದೇಶದಿಂದ ನಾನು ಹೇಳಿದ್ದೇನೆ – ಶಾಸಕ ಡಾ. ರಂಗನಾಥ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!