ಎಷ್ಟು ಬೇಗ ಮೋದಿ ತೊಲಗುತ್ತಾರೋ ಅಷ್ಟು ಬೇಗ ನಮ್ಮ ದೇಶ ಸುಧಾರಣೆ ಆಗುತ್ತೆ – ಸಿದ್ದರಾಮಯ್ಯ

ದೇಶದಲ್ಲಿ ನಿರುದ್ಯೋಗ ತಾಂಡವವಾಡ್ತಾ ಇದೆ. ಯುವ ಶಕ್ತಿಯ ದುರುಪಯೋಗ ಆಗ್ತಾ ಇದೆ. ಅದು ಸದುಪಯೋಗ ಆಗಬೇಕಂದ್ರೆ ನಾವೆಲ್ಲ ನರೇಂದ್ರ ಮೋದಿ( narendra modi) ಗೆ ದಿಕ್ಕಾರ ಹಾಕೋಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಕಿಡಿ ಕಾರಿದ್ದಾರೆ.

ಆರ್ಥಿಕತೆ ಮಟ್ಟ 3 ಇದ್ದದ್ದು ಈಗ 160 ಸ್ಥಾನ ಆಗಿದೆ. ಅಗ್ನಿ ಪಥ್ (agni path ) ಯೋಜನೆ ತಂದಿದ್ದಾರೆ ಇದು ಯುವಕರ ದಾರಿ ತಪ್ಪಿಸುವ ಯೋಜನೆಯಾಗಿದೆ. 53ಲಕ್ಷದ 11 ಸಾವಿರ ಕೋಟಿ ಸಾಲ . ಮೋದಿ ಬಂದ ಮೇಲೆ 155 ಲಕ್ಷ ಕೋಟಿ ಆಗಿದೆ. 8 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಿರುದ್ಯೋಗ, ಬಡತನ, ಬೆಲೆ ಏರಿಕೆ ಇವೆಲ್ಲ ಮುಚ್ಚಿ ಹಾಕೋಕೆ ಧರ್ಮದ ವಿಷಯ ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ರೋಹಿತ್ ಚಕ್ರತೀರ್ಥ ಇಡಿ ಪಠ್ಯ ಪುಸ್ತಕ ಕೇಸರಿಕರಣ ಮಾಡಿ ಮಕ್ಕಳಲ್ಲಿ ವಿಷ ಬೀಜ ಬಿತ್ತಿದ್ದಾರೆ. ಇದನ್ನೂ ಓದಿ : –  ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ – ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆ

ಬಿಜೆಪಿ (bjp) ಯವ್ರಿಗೆ ಸಾಮಾಜಿಕ ನ್ಯಾಯ ಕೊಡುವ ಮನಸ್ಸು, ಕಾಳಜಿ ಇಲ್ಲ. ಕರ್ನಾಟಕದಲ್ಲಿ 40 % ಸರ್ಕಾರ ಇದೆ. ನಾನು ರಾಜಕೀಯ ಜೀವನದಲ್ಲಿ ಇಂತ ಕೆಟ್ಟ ಭ್ರಷ್ಟಚಾರ ಸರ್ಕಾರ ನೋಡಿಲ್ಲ ಈವಾಗ ನೊಡ್ತಾ ಇದ್ದೀನಿ ಎಂದು ಹೇಳಿದ್ರು. ಎಷ್ಟು ಬೇಗ ನರೇಂದ್ರ ಮೋದಿ ತೊಲಗುತ್ತಾರೋ ಅಷ್ಟು ಬೇಗ ನಮ್ಮ ದೇಶ ಸುಧಾರಣೆ ಆಗುತ್ತೆ ಎಂದು ಕರೆ ನೀಡಿದ್ರು. ಪಿ ಎಸ್ ಐ ಹಗರಣದಲ್ಲಿ ಆರ್ ಅಶೋಕ್, ಅಶ್ವತ್ಥ್ ನಾರಾಯಣ್, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಮಗ ವಿಜಯೇಂದ್ರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ರು.

ಇದನ್ನೂ ಓದಿ : – ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ- ಸುಪ್ರೀಂ ಕೋರ್ಟ್ ಆದೇಶ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!