ಗುಜರಾತ್ (Gujrath) , ಹಿಮಾಚಲ ಪ್ರದೇಶ (Himachal pradesh) ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ . ಅಶೋಕ್ (R. ashok) ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪರವಾಗಿ ಜನಬೆಂಬಲ ಇರೋದು ಗೊತ್ತಾಗುತ್ತಿದೆ. ಕರ್ನಾಟಕದ ಮುಂದಿನ ಚುನಾವಣೆಗೆ ಇದು ದಾರಿದೀಪ. ಕಾಂಗ್ರೆಸ್ ನ್ನು ಜನ ತಿರಸ್ಕಾರ ಮಾಡ್ತಾ ಇದ್ದಾರೆ.
ಕಾಂಗ್ರೆಸ್ (Congress) ಗೆ ಈ ದೇಶದಲ್ಲಿ ಭವಿಷ್ಯ ಇಲ್ಲ. ಕಾಂಗ್ರೆಸ್ ಸೋಲಿಸಲು ಆಮ್ ಆದ್ಮಿ ಸಾಕು ಅನ್ನೋ ಸಂದೇಶ ಸಿಗ್ತಾ ಇದೆ. ಆಮ್ ಆದ್ಮಿ (AAP) ಕೇವಲ 4-5 ಪರ್ಸೆಂಟ್ ಮತಗಳನ್ನು ಕರ್ನಾಟಕದಲ್ಲಿ ಪಡೆದ್ರೂ ಸಾಕು. ಕಾಂಗ್ರೆಸ್ ಧೂಳಿಪಟ ಗ್ಯಾರಂಟಿ. ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಸಮಯ ಬಂದಿದೆ ಎಂದು ಕಾಂಗ್ರೆಸ್ ವಿರುದ್ದ ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ : – ಆಮ್ ಆದ್ಮಿಯಿಂದ ನಮಗೆ ತೊಂದರೆ- ದಿನೇಶ್ ಗುಂಡೂರಾವ್