ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ (CN Ashwath Narayan) ರಾಮನಗರ( ramagara ) ದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜನರ ತಾಳ್ಮೆಯನ್ನ ಕೆಲವರು ಪರೀಕ್ಷೆ ಮಾಡುತ್ತಿದ್ದಾರೆ. ಸಿಎಂ ಈಗಾಗಲೇ ಸ್ವಷ್ಟ ಸಂದೇಶ ಕೊಟ್ಟಿದ್ದಾರೆ. ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಎನ್ ಕೌಂಟರ್ ಮಾಡುವುದಕ್ಕೂ ನಾವು ಸಿದ್ದರಿದ್ದವೇ ಎಂದು ಸಿಎಂ ಈಗಾಗಲೇ ತಿಳಿಸಿದ್ದಾರೆ. ಪ್ರವೀಣ್ ಹತ್ಯೆ ರೀತಿ ಬೇರೆ ಎಲ್ಲೂ ಆಗಬಾರದು ಎಂದು ತಿಳಿಸಿದ್ರು.
ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ವಿಚಾರ
ನಮ್ಮ ಸರ್ಕಾರ ಸಮರ್ಥವಾಗಿದೆ. ಹತ್ಯೆಗಳು ಆದಾಗ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಪ್ರವೀಣ್ ಹತ್ಯೆ ಕೇಸ್ ನಲ್ಲೂ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಈ ರೀತಿಯ ಘಟನೆ ನಡೆಯಬಾರದು ಎಂಬ ಅಪೇಕ್ಷೆ ಕಾರ್ಯಕರ್ತರದ್ದು, ಯುಪಿಗಿಂತಲೂ ಐದು ಹೆಜ್ಜೆ ಮುಂದೆ ಹೋಗುತ್ತೇವೆ . ಯುಪಿ ಗಿಂತ ಒಳ್ಳೇ ಮಾಡಲ್ ಕೊಡುತ್ತೇವೆ. ಕರ್ನಾಟಕ ( karanataka ) ಇತರರಿಗೆ ಮಾದರಿಯಾಗಿರುತ್ತದೆ. ಜನರು ಭಾವನೆ ವ್ಯಕ್ತಪಡಿಸಲೇ ಬೇಕು. ತಾಳ್ಮೆಗೂ ಇತಿಮಿತಿ ಇದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದೇವೆ. ಮುಂದೆ ಸಹಿಸಿಕೊಳ್ಳುವುದಿಲ್ಲ. ಮುಂದೆ ನಮ್ಮ ಆಕ್ಷನ್ ಏನು ಎಂದು ತೋರಿಸುತ್ತೇವೆ. ನಡುಕ ಹುಟ್ಟಿಹಾಕಲು ನಾವು ತಯಾರು ಇದ್ದೇವೆ. ಆ್ಯಕ್ಷನ್ ಕೊಡಲು ಕಷ್ಟ ಇಲ್ಲ. ನಮ್ಮ ಆ್ಯಕ್ಷನ್ ಯಾವ ರೀತಿ ಇರುತ್ತೆ ನೋಡಿ ಎಂದು ಹೇಳಿದ್ರು. ಇದನ್ನೂ ಓದಿ : – ರಾಜ್ಯದಲ್ಲಿ ಸರ್ಕಾರವೇ ಸತ್ತು ಹೋಗಿದೆ – ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ
ಪಿ.ಎಫ್ ಐ, ಎಸ್ ಡಿಪಿಐ ಬ್ಯಾನ್ ಮಾಡುವ ಕಾಂಗ್ರೆಸ್ ನಾಯಕರ ಒತ್ತಾಯ ವಿಚಾರ
ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ನೈತಿಕತೆ ಇಲ್ಲದ ಪಕ್ಷ ಅಂದರೆ ಅದು ಕಾಂಗ್ರೆಸ್ ( congress) ಪಕ್ಷ. ಪಿಎಫ್ ಐ ವಿರುದ್ಧ ಇದ್ದ ಕೇಸ್ ಅನ್ನ ವಿತ್ ಡ್ರಾ ಮಾಡಿದ್ರು. ಅವರಿಗೆ ಯಾವ ನೈತಿಕತೆ ಇದೆ ಮಾತನಾಡಲು. ಅವರಿಗೂ ಬೇರೆ ಬೇರೆ ಸಮಾಜ ದ್ರೋಹಿಗಳಿಗೂ ವ್ಯತ್ಯಾಸವಿಲ್ಲ. ಸಮಾಜಕ್ಕೆ ಈ ಪರಿಸ್ಥಿತಿ ಬರಲು ಕಾಂಗ್ರೆಸ್ ನವರೇ ಕಾರಣಕರ್ತರು. ತುಷ್ಠಿಕರಣದ ರಾಜಕಾರಣ ಮಾಡಿದವರು ಕಾಂಗ್ರೆಸ್ ನವರು. ಅವರಿಂದ ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ಕರ್ನಾಟಕ ಏನು ಎಂಬುದನ್ನ ತೋರಿಸುತ್ತೇವೆ. ಕಾಂಗ್ರೆಸ್ ಬೆಳೆಸಿರುವ ಸಂಸ್ಕೃತಿ ಭ್ರಷ್ಟಾಚಾರ. ಅದನ್ನ ಕಿತ್ತೆಸೆಯಲು ಬಿಜೆಪಿ ಬದ್ದವಾಗಿದೆ. 75 ಆಗಿದ್ದರು ನಾನೇ ನಾನೇ ಎಂದು ಸಿದ್ದರಾಮಯ್ಯ ( siddaramaiah )ಹೇಳುತ್ತಿದ್ದಾರೆ. 75 ಆದರೂ ಇನ್ನು ನಿವೃತ್ತಿ ಪಡೆದಿಲ್ಲ. ಮೊದಲು ಅವರಿಗೆ ನಿವೃತ್ತಿ ಕೊಡಲಿ. ಇಂತಹ ಭ್ರಷ್ಟಾಚಾರಿಗಳು ತೊಲಗಲಿ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಮುಖ್ಯಮಂತ್ರಿ ಬೊಮ್ಮಾಯಿ ಸಾಫ್ಟ್ ಅಂತ ತಿಳ್ಕೋಬೇಡಿ – ಡಾ.ಕೆ ಸುಧಾಕರ್ ಎಚ್ಚರಿಕೆ