ಆಮ್ ಆದ್ಮಿ ಪಕ್ಷದಿಂದ (AAP) ನಮಗೆ ತೊಂದರೆಯಾಗುತ್ತಿದೆ. ಆಪ್ ಪಕ್ಷದವರು ಬಿಜೆಪಿಗೆ (BJP) ಅನುಕೂಲವಾಗುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ (Dinesh Gundu Rao) ಕಿಡಿಕಾರಿದ್ದಾರೆ.
ಗುಜರಾತ್ (Gujarath) ಹಾಗೂ ಹಿಮಾಚಲ ಪ್ರದೇಶದ (Himachal Pradesh) ಚುನಾವಣಾ ಫಲಿತಾಂಶದ (Election Result) ಬಗ್ಗೆ ಪ್ರತಿಕ್ರಿಯಿಸಿದ ಅವರು ಆಪ್ ಪಕ್ಷದಿಂದ ನಮಗೆ ತೊಂದರೆಯಾಗುತ್ತಿದೆ. ಬಿಜೆಪಿಗೆ ಅನುಕೂಲವಾಗುವಂತೆ ಅವರು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಾವು ಗೋವಾ ಸೇರಿದಂತೆ ಹಲವು ಕಡೆ ನೋಡಿದ್ದೇವೆ. ನಮಗೆ ಗುಜರಾತ್ನಲ್ಲಿ ಹೆಚ್ಚು ಸೀಟ್ಗಳ ನಿರೀಕ್ಷೆಯಿತ್ತು. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ : – ಗೆಲುವಿನತ್ತ ಬಿಜೆಪಿಯ ಹಾರ್ದಿಕ್ ಪಟೇಲ್ ಹೆಜ್ಜೆ – ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ
2013 ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಗೆದ್ದಿತ್ತು. ಆಗ ನಾವು ರಾಜ್ಯದಲ್ಲಿ ಗೆಲುವು ಸಾಧಿಸಿರಲಿಲ್ಲವಾ ಎಂದು ಪ್ರಶ್ನಿಸಿದ್ರು. ಆದ್ದರಿಂದ ಇಲ್ಲಿ ಪ್ರಭಾವ ಬೀರಲ್ಲ. ಅಲ್ಲಿಯ ಚುನಾವಣೆಯೇ ಬೇರೆ ಇಲ್ಲಿಯ ಚುನಾವಣೆಯೇ ಬೇರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನು ಓದಿ : – ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಗೆ ಗೆಲುವು