ಹಿಮಾಚಲ ಪ್ರದೇಶ (Himachal pradesh) ದಲ್ಲಿ ನಾವು ಗೆದ್ದಿದ್ದೇವೆ. ಗುಜರಾತ್ (Gujrath) ನಲ್ಲಿ ನಾವು ನಿರೀಕ್ಷೆ ಮಾಡಿರಲಿಲ್ಲ ಇಷ್ಟು ಅಂತರದಿಂದ ಸೋಲುತ್ತೇವೆ ಎಂದು ಸತೀಶ್ ಜಾರಕಿಹೊಳಿ (Satish jarakiholi) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು AAP 7 ಸ್ಥಾನವನ್ನು ಪಡೆದರು ಸಹ ನಮ್ಮ ಮತಗಳನ್ನ ಪಡೆದಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ (JDS) ನಿಂದ ನಮಗೇ ಏನೂ ತೊಂದರೆ ಇಲ್ಲ. ಅವರು ಗೆಲ್ಲೊ ಕಡೆ ಅವರು ಗೆಲ್ಲುತ್ತಾರೆ. ನಾವು ಗೆಲ್ಲುವ ಕಡೆ ನಾವೇ ಗೆಲುತ್ತೇವೆ. ಕ್ಲ್ಯಾಶ್ ಆಗುವಂತಹ ಸಂಭವ ಕಡಿಮೆ ಎಂದು ಹೇಳಿದ್ರು. ಸೆಕ್ಯುಲರ್ ವೋಟ್ ಗಳು ಬದಲಾವಣೆಯಾಗಿದೆ. ಈಗ ಪಕ್ಕದ ರಾಜ್ಯಗಳು ಕೇರಳ, ತಮಿಳುನಾಡು , ಆಂಧ್ರ ಈ ತರಹ ಇದೆ. ಯಾವುದೇ ಹೊಸ ಪಕ್ಷ ಬಂದ್ರೆ ಸಾಮಾನ್ಯವಾಗಿ ಸೆಕ್ಯುಲರ್ ವೋಟ್ ಗಳನ್ನ ಸೆಳೆಯುತ್ತಾರೆ. ಮುಸ್ಲಿಂ (Muslim) ಆಗಬಹುದು ಯಾರೇ ಆಗಬಹುದು ಎಲ್ಲರಿಗೂ ಒಂದೆ ಸ್ಥಾನ ಮಾನವನ್ನು ಕೊಡುತ್ತೆ. ಗೆಲ್ಲುವಂತಹವರಿಗೆ ಮೊದಲು ನಾವು ಟಿಕೆಟ್ ಕೊಡಬೇಕು. ಬಿಜೆಪಿಯವರು ಇದೇ ಸ್ಟ್ಯಾಟರ್ಜಿ ಬಳಸಿಯೇ ಗೆದಿದ್ದು . ಇದನ್ನು ಓದಿ : – ಗುಜರಾತ್ ನಲ್ಲಿ ಆಪ್ ಗೆ ಬಿಜೆಪಿಯಿಂದಲೇ ಫಂಡಿಂಗ್- ..! ಸಿದ್ದರಾಮಯ್ಯ ಗಂಭೀರ ಆರೋಪ
ಇಲ್ಲಿನ ಸಂಸ್ಕೃತಿ ರಾಜಕೀಯ ಬೇರೆ ಇದೇ. ಅಲ್ಲಿನ ಆಚಾರ ವಿಚಾರಗಳು ಸಹ ಬೇರೆ ತರಹ ಇದೆ. ನಾರ್ತ್ ಇಂಡಿಯ ಚುನಾವಣೆಯೇ ಬೇರೆ ಇದೇ. ಸೌತ್ ಇಂಡಿಯಾ ಚುನಾವಣೆಯೇ ಬೇರೆ ಇದೇ. ಆ ರಾಜ್ಯಕ್ಕೂ ಇಲ್ಲಿಗೂ ಏನೂ ಇಂಪ್ಯಾಕ್ಟ್ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇದನ್ನು ಓದಿ : – ವಿಪಕ್ಷಗಳು ಹೇಳಿದ್ದು ಯಾವುದು ನಿಜವಾಗಿದೆ – ಸಿಎಂ ಬೊಮ್ಮಾಯಿ ಪ್ರಶ್ನೆ