ಅಧಿವೇಶನ (Session) ವನ್ನ ಒಂದು ದಿನ ಮೊಟಕುಗೊಳಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶವಿಲ್ಲ.
ಕಬ್ಬುಬೆಳೆಗಾರರು,ಭತ್ತ ಬೆಳೆಗಾರರ ಬಗ್ಗೆ ಚರ್ಚೆಯಾಗಬೇಕು. ಸ್ಪೀಕರ್ ಎರಡು ದಿನ ಚರ್ಚೆ ಮಾಡೋಣ ಅಂದ್ರು. ಅವರು ಚರ್ಚೆಗೆ ಬರಲೇ ಇಲ್ಲ. ನಾವು ಅಖಂಡ ಕರ್ನಾಟಕದ ಚರ್ಚೆ ಬಗ್ಗೆ ಮಾತನಾಡಿದ್ದೆವು. ಬಿಜೆಪಿಯವರು ಉತ್ತರ ಕರ್ನಾಟಕದ ಬಗ್ಗೆ ಬಹಳ ಮಾತನಾಡ್ತಾರೆ. ಅದೆಂತದ್ದೋ ಪಾದಯಾತ್ರೆ ಮಾಡಿದ್ರು ಎಂದು ವ್ಯಂಗ್ಯವಾಡಿದ್ದಾರೆ.
ಸಿ.ಟಿ.ರವಿ (CT.ravi) ಗೆ ಚರ್ಚೆಗೆ ಅವಕಾಶ ಕೊಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ರೈತರ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕಲ್ಲ ಎಂದು ಕೇಳಿದ್ದಾರೆ. ಇದನ್ನು ಓದಿ : – ಸಿಲಿಕಾನ್ ಸಿಟಿಯಲ್ಲಿ ಇಂದು ಆಟೋ ಚಾಲಕರಿಂದ ಬೃಹತ್ ಪ್ರತಿಭಟನೆ
ಗಡಿ ವಿವಾದ (Border issue) ವನ್ನ ನಾವು ತೆಗೆದುಕೊಳ್ಳಲಿಲ್ವಾ? ರೈತರ ವಿಚಾರ ತೆಗೆದುಕೊಳ್ಳಲಿಲ್ವಾ? ಚಿಲುಮೆ ಕೇಸ್ ಚರ್ಚೆಗೆ ಅವಕಾಶ ಮಾಡಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ವಾರ ಸದನ ಮಾಡೋಕೆ ಹೇಳಿ ಎಂದು ತಿಳಿಸಿದ್ರು. ಅಮಿತ್ ಶಾ ಬರ್ತಾರೆ ಹೋಗ್ತಾರೆ. ಅವರು ಬಂದ್ರು ಅಂದ್ರೆ ಸದನ ಮಾಡೋಕೇನು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : – ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್ನಿಂದ 18 ಮಕ್ಕಳ ಸಾವು- ಗ್ಯಾಂಬಿಯಾ ಬಳಿಕ ಉಜ್ಬೇಕಿಸ್ತಾನ ಆರೋಪ