ಇನ್ಮುಂದೆ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ ಗೆ ಬರಲಿದೆ. ಶೇ.೫೦ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ್ ( M.B PATIL ) ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೋಗಿದ್ದ ಮತಗಳಲ್ಲಿ ಅರ್ಧದಷ್ಟು ನಮಗೆ ಬರಲಿದೆ. ಯಡಿಯೂರಪ್ಪರನ್ನ ಬಿಜೆಪಿ ಹೇಗೆ ನಡೆಸಿಕೊಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರನ್ನ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ( Yeddyurappa ) ಅವರದ್ದು ಮುಗಿದ ಅಧ್ಯಾಯ. ಎರಡು ಬಾರಿ ಅವರಿಗೆ ಪೂರ್ಣ ಅಧಿಕಾರ ಕೊಡಲಿಲ್ಲ. ಅವರಿಂದಲೇ ಆಪರೇಷನ್ ಕಮಲ ಮಾಡಿಸಿ ನಡೆಸಿಕೊಂಡಿರೊದು ಗೊತ್ತಿದೆ ಎಂದು ಹೇಳಿದ್ರು.
ಪ್ರಚಾರ ಸಮಿತಿ ಪದಾಧಿಕಾರಿಗಳ ಲಿಸ್ಟ್ ರೆಡಿ ಆಗಿದೆ. 8-10 ದಿವಸದಲ್ಲಿ ಲಿಸ್ಟ್ ಅನೌನ್ಸ್ ಮಾಡ್ತಾ ಇದ್ದೇನೆ. ಕಾಂಗ್ರೆಸ್ ಸರ್ಕಾರದ ಸಾಧನೆ, ಬಿಜೆಪಿ ವೈಫಲ್ಯ ಜನರಿಗೆ ತಿಳಿಸುವ ಕೆಲಸಮಾಡುತ್ತೇವೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಸೇರಿ ಪ್ರೆಸ್ ಮೀಟ್ ಮಾಡ್ತೇವೆ. ಜಿಲ್ಲಾವಾರು ಮಠಾಧೀಶರ ಭೇಟಿ ಮಾಡ್ತೇವೆ. ಎಲ್ಲ ಸಮುದಾಯದ ಮಠಕ್ಕೆ ಭೇಟಿ ನೀಡ್ತೇನೆ. ಜೊತೆಗೆ ಚರ್ಚ್,ಮಸೀದಿ ಗೆ ಭೇಟಿ ನೀಡ್ತೇನೆ. ಪ್ರಮಖವಾಗಿ ಪಕ್ಷ ಸಂಘಟನೆ ಮಾಡ್ತೇವೆ. ಜೊತೆಗೆ ಮಠ, ಮಸೀದಿ ಚರ್ಚ್ ಗೂ ಭೇಟಿ ಮಾಡುತ್ತೇನೆ. ಭಾರತ್ ಜೋಡೋ ಯಾತ್ರೆಯ ಬಗ್ಗೆ ಸಮಿತಿ ಮಾತನಾಡುತ್ತೆ. ಎಲ್ಲಿ ಸಮಾವೇಶ ಮಾಡಬೇಕು ಅಂತ ಸಮಿತಿ ತೀರ್ಮಾನ ಮಾಡುತ್ತೆ. ಸೆಪ್ಟೆಂಬರ್ ಗೆ ಭಾರತ್ ಜೋಡೋ ಯಾತ್ರೆ ಫ್ರಿ ಪೋನ್ ಆಗಿದೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಹೈಕೋರ್ಟ್ ನಿಂದ ಎಸಿಬಿ ರದ್ದುಗೊಳಿಸಿ ಆದೇಶ – ಈ ಬಗ್ಗೆ ಸಿಎಂ ಪರಿಶೀಲನೆ ನಡೆಸುತ್ತಿದ್ದಾರೆ – ಆರಗ ಜ್ಞಾನೇಂದ್ರ
ಸಿಎಂ ಬದಲಾವಣೆ ವಿಚಾರ
ಗೊಂದಲ ಸೃಷ್ಟಿ ಮಾಡಿದ್ದು ಬಿಜೆಪಿ. ಬಿಜೆಪಿ ಮಾಜಿ ಶಾಸಕರು ಸಿಎಂ ಬದಲಾವಣೆ ಹೇಳಿಕೆ ಕೊಟ್ರು. ಅಂದ್ರೆ ಗೊಂದಲ ಯಾರಲ್ಲಿ ಇದೆ. ಶಾಸಕರ ಬಗ್ಗೆ ಬಿಜೆಪಿ ಏನ್ ಕ್ರಮ ತೆಗೆದುಕೊಂಡ್ತು. ಮೊದಲು ಮಾತನಾಡಿದವರ ಬಗ್ಗೆ ಬಿಜೆಪಿ ಕ್ರಮ ತೆಗೆಕೊಳ್ಳಲಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಕಾಂಗ್ರೆಸ್ ಡಬ್ಬಲ್ ಡೋರ್ ಬಸ್
ಕಾಂಗ್ರೆಸ್ ( CONGRESS) ಡಬ್ಬಲ್ ಡೋರ್ ಬಸ್ ಗೆ ಸುಧಾಕರ್ ಎಲ್ಲಿ ಹತ್ತಿದ್ರು, ಎಲ್ಲಿ ಇಳಿದ್ರು, ಎಷ್ಟು ಬಸ್ ಚೇಂಜ್ ಮಾಡಿದ್ರು ಅವರನ್ನೇ ಕೇಳಬೇಕಾಗಿದೆ. ಮತ್ತೆ ಬಂದರೆ ಬಸ್ ಹತ್ತಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ರು.
ಇದನ್ನೂ ಓದಿ : – ಸುಬ್ಬಣ್ಣ ನಮ್ಮನ್ನ ಅಗಲಿರೋದು ಬಹಳ ದುಃಖಕರ ಸಂಗತಿ – ಸಿಎಂ ಬೊಮ್ಮಾಯಿ