ಮಹಾರಾಷ್ಟ್ರ (Maharastra) ಕರ್ನಾಟಕ ಗಡಿ ವಿವಾದ ಭಾರತ ಪಾಕ್ ಗಡಿ ವಿವಾದವಲ್ಲ. ರಾಜಕಾರಣಕ್ಕಾಗಿ ಕೆಲವರು ಬಳಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Prahalad joshi) ಹೇಳಿಕೆಗೆ ವಿಜಯಪುರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಯಾತೆ ತೆಗೆದಿದ್ದು ಅವರ ಸರ್ಕಾರ. ಯಾರಿಗೆ ಬುದ್ಧಿವಾದ ಹೇಳ್ತಿದ್ದಾರೆ ಇವರು. ಯಾರು ರಾಜಕಾರಣ ಮಾಡುತ್ತಿದ್ದಾರೆ. ನಾವಂತೂ ಮಾಡಿಲ್ಲ. ಕಳ್ಳತನ ಮಾಡುವರು ನೀವೇ. ಪೊಲೀಸರು (Police) ಆಗುವರು ನೀವೇ ಎಂದು ಪ್ರಹ್ಲಾದ್ ಜೋಷಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಗಡಿ ವಿವಾದ ಸುಪ್ರೀಂ ಕೋರ್ಟ್ ಹೊರಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು – ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಗಡಿ ವಿವಾದ ಮುಗಿದ ಅಧ್ಯಾಯ. ನಮ್ಮ ನಿಲುವು ರಾಜ್ಯದ ಜನರ ನಿಲುವು ಇದೆ ಆಗಿದೆ ಎಂದು ಹೇಳಿದ್ರು.
ಇದನ್ನೂ ಓದಿ : – ಅಧಿಕಾರದಲ್ಲಿರಬೇಕೆಂದು ಸಿದ್ದರಾಮಯ್ಯಗೆ ಆಸೆ ಇದೆ – ಅಶ್ವಥ್ ನಾರಾಯಣ್