ಏಲಕ್ಕಿ ಬಾಳೆ, ಮುಸುಕಿನ ಜೋಳ, ಅರಿಶಿಣ (Turmeric) ಹಾಗೂ ತೆಂಗು (Coconut) ಲಕ್ಷಾಂತರ ಮೌಲ್ಯದ ಬೆಳೆಯನ್ನು ಸುಮಾರು 70 ರಿಂದ 80 ಕ್ಕೂ ಹೆಚ್ಚು ಆನೆ (Elephant) ಗಳ ಹಿಂಡು ನಾಶ ಮಾಡಿರುವ ಘಟನೆ ಚಾಮರಾಜನಗರ (Chamarajnagar) ತಾಲೂಕಿನ ಅರಕಲವಾಡಿ , ಲಿಂಗನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದಿದೆ.
ತಮಿಳುನಾಡಿ (Tamil nadu) ನ ಸತ್ಯಮಂಗಲ ಅರಣ್ಯದಿಂದ ಬಂದಿರುವ ಹಿಂಡು ಹಿಂಡು ಕಾಡಾನೆಗಳು ಅರಕಲವಾಡಿ ಗ್ರಾಮದ ಹನುಮಯ್ಯಗೆ ಸೇರಿದ ೪ ಎಕರೆ ಬೆಳೆದಿದ್ದ ಬಾಳೆ ಹಾಗೂ ತೆಂಗು ನಾಶ ಮಾಡಿದೆ. ಲಿಂಗನಪುರದ ರಾಮಣ್ಣಗೆ ಸೇರಿದ 2ಎಕರೆ ಮುಸುಕಿನ ಜೋಳ ನಾಶ ಮಾಡಿದೆ. ತಮಿಳುನಾಡಿನ ಗಡಿ ಭಾಗದ ರೈತರು ಸ್ಥಿತಿ ಹೇಳತೀರಾದಾಗಿದೆ. ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಜಮೀನಿನಲ್ಲಿ ಬೆಳೆದ ಬೆಳೆ ನಾಶಮಾಡುತ್ತಿವೆ.
ಇದನ್ನು ಓದಿ : – ಗುಜರಾತ್ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದೆ – ಡಾ.ಕೆ ಸುಧಾಕರ್