ನವೆಂಬರ್ 20 ರಂದು ಧಾರವಾಡ (Dharwad) ತಾಲೂಕಿನ ಮಂಗಳಗಟ್ಟಿ ಗ್ರಾಮದಿಂದ ಶಬರಿಮಲೆಗೆ (Shabarimalai) ಗೆ ಪಾದಯಾತ್ರೆ (Hiking) ಗೆ ಹೊರಟ ಮೂವರು ಭಕ್ತರ ಜೊತೆ ಒಂದು ಶ್ವಾನ ಕೂಡಾ ಸೇರಿಕೊಂಡಿದೆ. ಮಂಗಳಗಟ್ಟಿಯಿಂದ ಹೊರಟ ಮಂಜು ಕಮ್ಮಾರ, ರವಿ ಹಾಗೂ ನಾಗನಗೌಡ ಎಂಬುವರಿಗೆ ಧಾರವಾಡ ಬೈಪಾಸ್ ರಸ್ತೆಯಲ್ಲಿ ಶ್ವಾನ ಸಿಗುತ್ತೆ. ಆಗ ಈ ಮೂವರು ಊಟಕ್ಕೆ ಕುಳಿತಾಗ ಆ ಶ್ವಾನಕ್ಕೆ ಊಟ ಕೂಡಾ ಹಾಕ್ತಾರೆ.
ಇವರ ಜೊತೆಗೆ ಈ ಶ್ವಾನ (Dog) ಕೂಡಾ ಶಬರಿಮಲೆಗೆ ಕಡೆ ಹೊರಟಿದೆ. ಸದ್ಯ ಈ ಮೂವರು ಭಕ್ತರು ಉತ್ತರ ಕನ್ನಡ ಜಿಲ್ಲೆ ದಾಟಿ ಮುಂದಕ್ಕೆ ಹೊರಟಿದ್ದಾರೆ. ಇವರು ಆ ಶ್ವಾನವನ್ನ ಅಲ್ಲಿಂದ ಎಷ್ಟೇ ವಾಪಸ್ ಒಡಿಸಲು ಪ್ರಯತ್ನ ಮಾಡಿದ್ರು, ಅದು ಮಾತ್ರ ಇವರ ಸಾಥ್ ಬಿಡಲೇ ಇಲ್ಲಾ. ಹೀಗಾಗಿ ಅನಿವಾರ್ಯವಾಗಿ ಇವರೆಲ್ಲ ಅದನ್ನ ಶಬರಿಮಲೈವರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ 5೦೦ ಕಿಲೋ ಮೀಟರ್ ತಮ್ಮ ಪಾದಯಾತ್ರೆ ಮಾಡಿದ್ದಾರೆ. ಇನ್ನು ಇವರು ನಮ್ಮ ರಾಜ್ಯ ದಾಟಿದ ಮೇಲೆ ಕೇರಳಕ್ಕೆ ಹೋಗಬೇಕಿದೆ. ಅಲ್ಲಿವರೆಗೆ ಹೋಗಲು ಇನ್ನು 5೦೦ ಕಿಲೋ ಮೀಟರ್ ಯಾತ್ರೆ ಮಾಡಬೇಕಿದೆ. ಆದರೆ ಇವರ ಸಾಥ್ ಬಿಡದೇ ಈ ಶ್ವಾನ ಇವರ ಜೊತೆ ಯಾತ್ರೆ ಮಾಡುತ್ತಿರುವದು ಎಲ್ಲರಿಗೆ ಆಶ್ಚರ್ಯ ತರಿಸಿದೆ.
ಇದನ್ನೂ ಓದಿ : – ಬೆಂಗಳೂರಿನಲ್ಲಿ ಸಚಿವ ವಿ ಸೋಮಣ್ಣ ಮನೆಗೆ ರೌಡಿಶೀಟರ್ ನಾಗ ಎಂಟ್ರಿ