ತಮ್ಮ ಕಡೆಯವರ ವಾಹನಕ್ಕೆ ದಂಡ ಹಾಕಿದ ಟ್ರಾಫಿಕ್ ASI ಮೇಲೆ ಏರ್ ಪೋರ್ಟ್ ಇನ್ಸ್ ಪೆಕ್ಟರ್ ದರ್ಪ

ಟ್ರಾಫಿಕ್ ASI ಮೇಲೆ ಬೆಂಗಳೂರಿನ ಏರ್ ಪೋರ್ಟ್ ಇನ್ಸ್ ಪೆಕ್ಟರ್ ದರ್ಪ ಮೆರೆದಿದ್ದಾರೆ. ಈ ದರ್ಪದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ರಾಫಿಕ್ ASI ಮೇಲೆ ಬೆಂಗಳೂರಿನ ಏರ್ ಪೋರ್ಟ್ ಇನ್ಸ್ ಪೆಕ್ಟರ್ ದರ್ಪ ಮೆರೆದಿದ್ದಾರೆ. ಈ ದರ್ಪದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಕಡೆಯವರ ವಾಹನಕ್ಕೆ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಏರ್ಪೋಟ್ ಲಾ ಅಂಡ್ ಆರ್ಡರ್ ಇನ್ಸ್ಪೆಕ್ಟರ್ ಮುತ್ತುರಾಜ್ ಟ್ರಾಫಿಕ್ ASI ವೆಂಕಟೇಶ್ ಅವರಿಗೆ ಕರೆ ಮಾಡಿ ದರ್ಪ ಮೆರೆದಿದ್ದಾರೆ. ದರ್ಪದ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕಳೆದ 26 ರಂದು ಹೆದ್ದಾರಿಯಲ್ಲಿ ಬರ್ತಿದ್ದ ಕಾರನ್ನ ಸಂಚಾರಿ ಪೊಲೀಸರು ತಡೆದಿದ್ದರು. ಈ ವೇಳೆ ಕಾರಿನ ಮೇಲೆ 41,500 ರೂಪಾಯಿ ದಂಡವಿದ್ದು ಅದನ್ನು ಕಟ್ಟುವಂತೆ ಸೂಚಿಸಿದ್ದರು. ದಂಡ ಕಟ್ಟದೆ ಕಾರು ಮಾಲೀಕ ಇನ್ಸ್ ಪೆಕ್ಟರ್ ಮುತ್ತುರಾಜ್ ( muthu raj ) ಅವರಿಗೆ ಕರೆಮಾಡಿ ಕಾರನ್ನು ಬಿಡುವಂತೆ ಕೇಳಿದ್ದಾರೆ. ಅದರಂತೆ ಮುತ್ತುರಾಜ್ ವೆಂಕಟೇಶ್ ಗೆ ಹೇಳಿದ್ದಾರೆ. ಆದ್ರೆ ಕಾನೂನು ಎಲ್ಲರಿಗೂ ಒಂದೆ ಅಂತ ಕಾರು ಬಿಡಲು ASI ನಿರಾಕರಿಸಿದ್ದಾರೆ. ಕೊನೆಗೂ 2 ಸಾವಿರ ದಂಡ ಕಟ್ಟಿಸಿಕೊಂಡು ನೋಟಿಸ್ ಕೊಟ್ಟು ಎಎಸ್ಐ ಕಾರನ್ನು ಕಳಿಸಿದ್ದಾರೆ. ಹೀಗಾಗಿ ವಾಹನ ಹೋದ ನಂತರ ಎಎಸ್ಐಗೆ ಕರೆ ಮಾಡಿ ಮುತ್ತುರಾಜ್ ದರ್ಪ ಮೆರೆದಿದ್ದಾರೆ. ಇದನ್ನೂ ಓದಿ : –  ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ…!


ನಾನು ಯಾರು ಅಂತ ಗೊತ್ತಿಲ್ವ ತೋರಿಸ್ತೀನಿ ಎಂದು ಮುತ್ತುರಾಜ್ ಅವಾಜ್ ಹಾಕಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಸಾಮಾನ್ಯರಿಗೊಂದು ನ್ಯಾಯ ಇನ್ಸ್ಪೆಕ್ಟರ್ ಕಡೆಯವರಿಗೆ ಒಂದು ನ್ಯಾಯನಾ ಅಂತ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಪೆಕ್ಟರ್ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಇದನ್ನೂ ಓದಿ : –  ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟ್ಟರ್ – CEO ಪರಾಗ್ ಅಗರ್ವಾಲ್ ಸೇರಿದಂತೆ ಪ್ರಮುಖರು ವಜಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!