ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇದನ್ನೇ ಸಂವಿಧಾನ ಹೇಳುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT.Ravi) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಸೂದ್, ಫಾಝಿಲ್ ಮನೆಗೆ ಭೇಟಿ ನೀಡದೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು.
ಎಲ್ಲರನ್ನೂ ಸಮಾನವಾಗಿ ನೋಡಬೇಕು. ಇದನ್ನು ಸಂವಿಧಾನ ಹೇಳುತ್ತದೆ. ಪ್ರವೀಣ್ (praveen) ಕಾರ್ಯಕರ್ತ ಪಕ್ಷವಾಗಿ ಹೋಗಿದ್ದೇವೆ, ಸರ್ಕಾರದ ಬಗ್ಗೆ ಮಾತನಾಡಲ್ಲ. ಸರ್ಕಾರದ ಪ್ರಶ್ನೆಗಳನ್ನು ಅವರ ಬಳಿ ಕೇಳಿ, ಅದಕ್ಕೆ ನಾನು ಉತ್ತರ ಕೊಡಲ್ಲ ಎಂದರು. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನ. ಈವಾಗ ಪ್ರಶ್ನೆಗಳನ್ನು ಕೇಳುವವರು ಪ್ರಶಾಂತ್ ಪೂಜಾರಿ ಹತ್ಯೆ ನಡೆದಾಗ ಏನು ಹೇಳಿದ್ದರು ಎಂದು ಗೊತ್ತಿದೆ. ಕೆಲವು ಸಂಗತಿ ಹೇಳಲು ಆಗಲ್ಲ. ಇದನ್ನು ಓದಿ :- ಸಂಜಯ್ ರಾವತ್ ಬಂಧನ – ಸಂಸತ್ತಿನಲ್ಲಿ ವಿಪಕ್ಷಗಳಿಂದ ಭಾರಿ ಗದ್ದಲ, ಕಲಾಪ ಮುಂದೂಡಿಕೆ
ಹಾಗಂತ ಭಾವನೆ ಇಲ್ಲ ಎಂದು ಅಲ್ಲ. ದನಕಳ್ಳ ಕಬೀರ್ ಸತ್ತಾಗ ಪರಿಹಾರ ಕೊಡಲಾಗಿತ್ತು. ಎನ್ ಕೌಂಟರ್ ಮಾಡಿದ ಪೊಲೀಸರನ್ನು ಜೈಲಿಗೆ ಹಾಕಲಾಗಿತ್ತು. ಅದನ್ನು ಜಾತ್ಯಾತೀತ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ :- ಬಿಜೆಪಿ ಪರಿಷತ್ ಅಭ್ಯರ್ಥಿಯಾಗಿ ಬಾಬೂರಾಬ್ ಚಿಂಚನಸೂರ್ ನಾಮಪತ್ರ ಸಲ್ಲಿಕೆ –