ಬೆಂಗಳೂರಿ (Bangalore) ನಲ್ಲಿ ಹಲವು ಬೇಡಿಕೆಗಳ ಆಗ್ರಹಕ್ಕೆ ಅಂಗನವಾಡಿ ಕಾರ್ಯಕರ್ತೆ (Anganwadi teachers) ಯರು ಪ್ರತಿಭಟನೆ (Protest) ಗೆ ಇಳಿದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆಗಮಿಸಿದ್ದಾರೆ.
ರಾತ್ರಿ ಇಡೀ ಟ್ರೈನ್ ಹಾಗೂ ಬಸ್ ಗಳಲ್ಲಿ ಸಂಚಾರ ನಡೆಸಿ ಫ್ರೀಡಂ ಪಾರ್ಕ್ ನಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಕುಳಿತಿದ್ದಾರೆ. ಊಟದ ಬುತ್ತಿ ಹಾಗೂ ಲಗೇಜ್ ಸಮೇತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾರ್ಯಕರ್ತೆಯರು ಸಜ್ಜಾಗಿ ಬಂದಿದ್ದಾರೆ. ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಬೇಡಿಕೆಗಳು ಈಡೇರುವ ವರೆಗು ಪ್ರತಿಭಟನೆ ಮುಂದುವರೆಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರ (Government) ದ ಪ್ರಮುಖರು ಬಂದು ಮಾತುಕತೆ ನಡೆಸುವವರೆಗೂ ಮುಷ್ಕರ ಮುಂದುವರೆಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನು ಓದಿ :- ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ದೋಚಲು ಶುರು ಮಾಡಿದ್ದಾರೆ- ಮಾಧುಸ್ವಾಮಿ
ಪ್ರತಿಭಟನೆಯ ಪ್ರಮುಖ ಬೇಡಿಕೆ
* ಅಂಗನವಾಡಿ ಕಾರ್ಯಕರ್ತೆಯರಿಗೆ ಸುಪ್ರೀಂ ಆದೇಶದಂತೆ ಗ್ರ್ಯಾಚುಟಿ ಹಣ ಫಿಕ್ಸ್ ಮಾಡಬೇಕು
* ಹೊಸ ಶಿಕ್ಷಣ ನೀತಿಯಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನಾಗಿ ನೋಡಬೇಕು
* ಎಲ್ಲ ಇಲಾಖೆಯ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸ ಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ :- ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ – ಸಿಎಂ ಬೊಮ್ಮಾಯಿ