ಸೂರ್ಯವಂಶ ಧಾರಾವಾಹಿಯಲ್ಲಿ ನಾಯಕನಾಗಿ ಮರಳಿದ ಅನಿರುದ್ಧ್…!

‘ಜೊತೆ ಜೊತೆಯಲಿ’ ( JOTHE HOTHEALLI ) ಧಾರಾವಾಹಿಯಲ್ಲಿ ನಟಿಸಿದ್ದ ಅನಿರುದ್ಧ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು.

‘ಜೊತೆ ಜೊತೆಯಲಿ’ ( JOTHE JOTHEALLI ) ಧಾರಾವಾಹಿಯಲ್ಲಿ ನಟಿಸಿದ್ದ ಅನಿರುದ್ಧ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಆದರೆ ಕೆಲವೇ ತಿಂಗಳ ಹಿಂದೆ ಅವರು ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬರಬೇಕಾಯಿತು. ವಿಶೇಷ ಏನೆಂದರೆ ಅನಿರುದ್ಧ್ ಈಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಹಾಗಂತ ಅವರು ‘ಜೊತೆ ಜೊತೆಯಲಿ’ ಟೀಮ್ ಜೊತೆ ಸೇರಿಕೊಳ್ಳುತ್ತಿಲ್ಲ. ಹೊಸ ಧಾರಾವಾಹಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಈ ಸೀರಿಯಲ್ ಗೆ ‘ಸೂರ್ಯವಂಶ’ ( SURYAVAMSHA ) ಎಂದು ಹೆಸರು ಇಡಲಾಗಿದೆ. ‘ಸೂರ್ಯವಂಶ’ ಎಂಬ ಹೆಸರು ಕೇಳಿದರೆ ವಿಷ್ಣುವರ್ಧನ್ ನೆನಪಾಗುತ್ತಾರೆ. ಈಗ ಅವರ ಅಳಿಯ ಅನಿರುದ್ಧ್ ಅವರ ಹೊಸ ಧಾರಾವಾಹಿಗೆ ಇದೇ ಶೀರ್ಷಿಕೆ ಇಟ್ಟಿರುವುದು ವಿಶೇಷ. ಅಂದು ‘ಸೂರ್ಯವಂಶ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಎಸ್. ನಾರಾಯಣ್ ಅವರೇ ಈಗ ಧಾರಾವಾಹಿಗೂ ನಿರ್ದೇಶನ ಮಾಡುತ್ತಿದ್ದಾರೆ. ಈ ಹೊಸ ಸೀರಿಯಲ್ ಬಗ್ಗೆ ಕಿರುತೆರೆ ವೀಕ್ಷಕರಿಗೆ ಸಖತ್ ನಿರೀಕ್ಷೆ ಮೂಡಿದೆ.  ಇದನ್ನು ಓದಿ : –  ಅಟೋ ಚಾಲಕರ ಸಂಘದ ವಿರೋಧದ ನಡುವೆಯೂ ಹು–ಧಾ ಅವಳಿ ನಗರದ ಎಂಟು ಕಡೆ ಪ್ರಿಪೇಡ್ ಆಟೊ ಸೇವೆ..!

ಈ ಬಗ್ಗೆ ಅನಿರುದ್ಧ್ ಮಾಹಿತಿ ನೀಡಿದ್ದಾರೆ. ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ಕಲಾ ಸಾಮ್ರಾಟ್ ಎಸ್. ನಾರಾಯಣ್ ( S. NARAYAN ) ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನು ಓದಿ : – ಹಿಮಾಚಲ ಪ್ರದೇಶದಲ್ಲಿ ಟಫ್ ಫೈಟ್ ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!