ಶಾಸಕ ಪ್ರೀತಂ ಗೌಡ ವಿರುದ್ಧ ಮಾಜಿ ಸಚಿವ ರೇವಣ್ಣ ( revanna )ಪತ್ನಿ ಭವಾನಿ ರೇವಣ್ಣ ( bhavani revanna ) ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್, ಹೆಂಡ್ತಿ, ಮಕ್ಕಳು ಸಾಕಲು ಆಗದೆ ರೇವಣ್ಣ ಅವರ ಬಳಿ ಬಂದು ದಮ್ಮಯ್ಯ ಅಂತ ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದ್ದರು. ಆದರೆ ಅವರ ಮಗ ಇವತ್ತು ಶಾಸಕನಾಗಿ ಏಳನೇ ಕ್ಲಾಸ್ ಓದಿದವರು ಎಂದು ರೇವಣ್ಣನ (Revanna) ಬಗ್ಗೆ ಮಾತನಾಡ್ತಾನೆ ಎಂದು ಶಾಸಕ ಪ್ರೀತಂಗೌಡ (Preetham gowda) ವಿರುದ್ಧ ಭವಾನಿ ರೇವಣ್ಣ (Bhavani Revanna) ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹಾಸನ (Hassan) ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಶಾಸಕರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕುತ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ಎಲ್ಲವನ್ನೂ ನಾನೇ ಮಾಡ್ದೆ, ನನ್ನಿಂದಲೇ ಈ ಕೆಲಸ ಆಗಿದ್ದು ಎಂದು ಕೊಚ್ಚಿಕೊಳ್ಳುತ್ತಾರೆ. ಆ ಮಾತು ಅವರಿಗೆ ಎಷ್ಟು ಸರಿ ಅಂತ ಗೊತ್ತಿಲ್ಲ, ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲ ಎಂದು ಪ್ರೀತಂಗೌಡ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ : – ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ – ಸಿದ್ದರಾಮಯ್ಯ
7ನೇ ಕ್ಲಾಸ್ ಓದಿದವರು ಎಂದು ರೇವಣ್ಣ ಅವರನ್ನು ಖಂಡಿಸುತ್ತಾರೆ. ರೇವಣ್ಣ ಅವರ ವಿದ್ಯಾಭ್ಯಾಸನ ಜನರಿಗೆ ತೋರಿಸಿಕೊಂಡು ಕೆಲಸ ಮಾಡಬೇಕಾ? 8ನೇ ತರಗತಿ ಪಾಸ್ ಆಗಿರುವವರ ಹತ್ರನೇ ಅವರ ಅಪ್ಪ ಇಂಜಿನಿಯರ್ ಆಗಿದ್ದರೂ, ಬಂದು ದಮ್ಮಯ್ಯ ಅಂತ ಕೈಮುಗಿದಿದ್ರು. ಇದೇ ವೇಳೆ ಪತಿ ರೇವಣ್ಣ ಅವರನ್ನು ಡಿ ಹೊಗಳಿದ ಭವಾನಿ ರೇವಣ್ಣ ಅವರು 365 ದಿನಗಳಲ್ಲಿ 50ದಿನ ಮೀಟಿಂಗ್ಗಾಗಿ ಬೆಂಗಳೂರಿನಲ್ಲಿ ಉಳಿತಾರೆ, ಮೀಟಿಂಗ್ ಇಲ್ಲ ಅಂದರೆ ಬೆಂಗಳೂರಿಗೆ ಹೋಗ್ತಾನೆ ಇರಲಿಲ್ಲ. ಉಳಿದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಹಳ್ಳಿ ಹಳ್ಳಿಗೆ ಹೋಗಿ ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ರು.
ಇದನ್ನೂ ಓದಿ : – ಚಾಮರಾಜನಗರದಲ್ಲಿ ಉರುಳಿದ ವೀರಭದ್ರಸ್ವಾಮಿ ರಥ – ತಪ್ಪಿದ ದೊಡ್ಡ ಅನಾಹುತ