ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಭ್ರಷ್ಚಾಚಾರ (Ccorruption) ದ ವಿರುದ್ಧ ಮಾತಾಡೋ ನೈತಿಕ ಅರ್ಹತೆಯೇ ಇಲ್ಲ. 317 ಬ್ಯಾಂಕ್ ಖಾತೆಗಳ ಮೂಲಕ ಹವಾಲಾ ದಂಧೆ ಮಾಡಿರುವವರು, ಶಾಂತಿನಗರ ಗೃಹ ನಿರ್ಮಾಣ ಸೊಸೈಟಿಯ 1,456 ಕೋಟಿ ರೂ. ಮೊತ್ತದ ಆಸ್ತಿಗುಳುಂ ಮಾಡಿರುವವರು.
ಸುಬಗರಂತೆ ಬುಡಬುಡಿಕೆ ಮಾತುಗಳನ್ನಾಡುವುದು ಬದನೇಕಾಯಿ ತಿಂದು ವೇದಾಂತ ನುಡಿದಂತೆ. ಭ್ರಷ್ಟಾಚಾರದ ಹೆಬ್ಬಂಡೆ ಎಂದು ಫೋಸ್ಟ್ ಮಾಡುವ ಮೂಲಕ ಬಿಜೆಪಿ ಡಿ ಕೆ ಶಿವಕುಮಾರ್ (DK.Shivkuamr) ವಿರುದ್ದ ಕಿಡಿ ಕಾರಿದೆ.
ಕೈಪಕ್ಷ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಪಕ್ಷದ ಅಧ್ಯಕ್ಷೆಯಿಂದ ಹಿಡಿದು ಚಾಮರಾಜಪೇಟೆಯ ಪುಡಾರಿ ಶಾಸಕನವರೆಗೂ ಸಾಲುಸಾಲಾಗಿ ED ಹಿಡಿತದಲ್ಲಿದ್ದಾರೆ. ಜಾಮೀನಿನ ಮೇಲೆ ಹೊರಬಂದು ಈಗ ಭ್ರಷ್ಟಾಚಾರದ ಬಗ್ಗೆ ಗಂಟಲು ಹರಿಯುವಂತೆ ಕೂಗುವುದು ಕೈಪಕ್ಷದ ಅಧೋಗತಿಯ ಸೂಚನೆ. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ಮಾತ್ರ ನೀರು . ಕರಪ್ಟ್ ಕಾಂಗ್ರೆಸ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ
ತಾನು ಬಹಳ ಸಚ್ಚಾರಿತ್ರ್ಯ ಹೊಂದಿದವರಂತೆ ಬಿಂಬಿಸಿಕೊಳ್ಳುವ ಬಾದಾಮಿ ಶಾಸಕ ಸಿದ್ದರಾಮಯ್ಯ (Siddaramaiah) ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖ ಮಾತನಾಡುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ. ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ! ತಾನು ಕಳ್ಳ, ಪರರ ನಂಬ.. ಇದನ್ನೂ ಓದಿ : – ಮುನಿಯಪ್ಪ ಬಂಡಾಯ ಶಮನಕ್ಕೆ ಯತ್ನ -ಡಿಕೆಶಿ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸಂಧಾನ
ಸಿದ್ದರಾಮಯ್ಯರದು ಸ್ಪ್ಲಿಟ್ ಪರ್ಸನಾಲಿಟಿ. ಪಕ್ಷದ ಪ್ರಣಾಳಿಕೆಯಲ್ಲಿ ಭಾಗ್ಯಗಳ ಪುಂಗಿ ಊದಿ ಆಶ್ವಾಸನೆ ಕೊಟ್ಟ ಧನರಾಶಿಯೇ ಬೇರೆ. ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ ಆ ಭಾಗ್ಯಗಳಿಗೆ ಘೋಷಿಸಿದ ಪುಡಿಗಾಸು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ಸರಿ. ಇಷ್ಟೆಲ್ಲಾ ಹಳವಂಡಗಳ ಮೇಲೆ ಭಾಗ್ಯಗಳ ದುಡ್ಡನ್ನೂ ದೋಚಿದ್ದಾಯಿತು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ. ಇದನ್ನೂ ಓದಿ : – ಚಂದ್ರಶೇಖರ ಗುರೂಜಿ ಮಾನಸಿಕ ಕಿರುಕುಳ ನೀಡುತ್ತಿದ್ದರು- ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿಗಳು