ಚಿಲುಮೆ ಸಂಸ್ಥೆ (Chilume organization) ಗೆ ಕಾಂಗ್ರೆಸ್ (Congress) ನವರೇ ಅನುಮತಿ ಕೊಟ್ಟಿದ್ರು ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಡಾ ಜಿ ಪರಮೇಶ್ವರ್ (G.Paremeshwar ) ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರಿಗೆ ಇದೊಂದು ಕಾಯಿಲೆ ಎಂದು ಕಿಡಿ ಕಾರಿದ್ರು. ಏನೇ ಆರೋಪ ಮಾಡಿದ್ರು, ಕಾಂಗ್ರೆಸ್ ನವರೂ ಮಾಡಿಲ್ವಾ ಅಂತಾ ಕೇಳೋದು. ಯಾವಾಗ ಅನುಮತಿ ಕೊಟ್ಟಿದ್ರು.
ಯಾವ ನಿಯಮಗಳನ್ನು ಹಾಕಲಾಗಿತ್ತು. ಈ ಎಲ್ಲದರ ಬಗ್ಗೆ ತನಿಖೆ ನಡೆಸಲಿ. ತನಿಖೆ ನಡೆಸಿದ್ರೆ ಎಲ್ಲವೂ ಹೊರಗೆ ಬರಲಿದೆ. ತಮಗೆ ಬೇಕಾದಂತೆ ಮತದಾರರ ಹೆಸರು ಡಿಲೀಟ್ ಮಾಡೋದು, ಬದಲಾಯಿಸೋದು ಬಿಜೆಪಿ (BJP) ಮಾಡ್ತಾ ಇದೆ. ಚುನಾವಣಾ ಆಯೋಗಕ್ಕೂ ನಾವು ದೂರು ಕೊಟ್ಟಿದ್ದೇವೆ ತನಿಖೆ ಆಗಲಿ ಎಂದು ಹೇಳಿದರು.
ಇದೇ ವೇಳೆ ಮಂಗಳೂರು ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ನಡೆಸಬೇಕು. ಮಂಗಳೂರಿನಲ್ಲಿ ಈ ಹಿಂದೆ ಕೂಡಾ ಇಂಥ ಘಟನೆಗಳಾಗಿದ್ದವು .NIA ಸೂಕ್ತ ತನಿಖೆ ನಡೆಸಬೇಕು ಎಂದು ಜಿ ಪರಮೇಶ್ವರ್ ತಿಳಿಸಿದ್ದಾರೆ. ಇದನ್ನೂ ಓದಿ :– ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಿದೆ ಕಾಂಗ್ರೆಸ್ ಸ್ಥಿತಿ- ಸಚಿವ ಸುಧಾಕರ್
ಬಿಜೆಪಿ ಸರ್ಕಾರದ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ – ಕೆ .ಎಚ್ ಮುನಿಯಪ್ಪ
ಹಿಂದೆಂದೂ ಯಾವುದೇ ಸರ್ಕಾರ ಮಾಡಿದ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ (KH.Muniyappa) ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಬಿಜೆಪಿ ಸರ್ಕಾರದ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದು ಕೆ .ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ :– ಮಂಗಳೂರಿನ ಬಾಂಬ್ ಪ್ರಕರಣಕ್ಕೂ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ – ಪ್ರೇಮರಾಜ್