ಗುಜರಾತ್ ವಿಧಾನಸಭೆ ಚುನಾವಣೆ (Gujrath vidhanasabha election ) ಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಮೊರ್ಬಿ (Morbhi ) ಕ್ಷೇತ್ರದಲ್ಲಿ ಭೀಕರ ದುರಂತ ಸಂಭವಿಸಿತ್ತು. ಇದು ಆಡಳಿತಾರೂಢ ಬಿಜೆಪಿಗೆ ಭಾರಿ ಮುಜುಗರ ಉಂಟುಮಾಡಿತ್ತು.
ಮೊರ್ಬಿ ಜಿಲ್ಲೆಯ ಪುರಾತನ ತೂಗು ಸೇತುವೆ ಅಕ್ಟೋಬರ್ 30ರಂದು ಏಕಾಏಕಿ ಕೇಬಲ್ಗಳು ತುಂಡಾದ ಪರಿಣಾಮ, ಅದರ ಮೇಲಿದ್ದ ನೂರಾರು ಮಂದಿ ಮಚ್ಚು ನದಿಗೆ ಬಿದ್ದಿದ್ದರು. ಅವರಲ್ಲಿ ಕನಿಷ್ಠ 135 ಮಂದಿ ಮೃತಪಟ್ಟಿದ್ದರು. ಚುನಾವಣೆ ಸಮೀಪದಲ್ಲಿ ಸಂಭವಿಸಿದ್ದ ದುರಂತ ಬಿಜೆಪಿಗೆ ಭಾರಿ ಹಿನ್ನಡೆ ಎಂದೇ ಭಾವಿಸಲಾಗಿತ್ತು. ಆದ್ರೆ ಮೊರ್ಬಿ ಕ್ಷೇತ್ರದಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ.
ಇದನ್ನು ಓದಿ : – ಗೆಲುವಿನತ್ತ ಬಿಜೆಪಿಯ ಹಾರ್ದಿಕ್ ಪಟೇಲ್ ಹೆಜ್ಜೆ – ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ