ನಾಳೆ ನೂತನ ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮ ಇದೆ. ಹಾಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ( basavaraj bommai) ದೆಹಲಿಗೆ ಹೋಗಿದ್ದಾರೆ. ಸಂಪುಟದ ಬಗ್ಗೆ ಚರ್ಚೆಯಾಗುತ್ತಾ ಎಂಬ ನನಗೆ ಮಾಹಿತಿ ಇಲ್ಲ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ (c.t ravi) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ಈಶ್ವರಪ್ಪನವ್ರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಸಂಪುಟಕ್ಕೆ ಸೇರಿಸಬೇಕು ಅಂತ ನ್ಯಾಯವೂ ಇದೆ. ಸಂಪುಟ ವಿಸ್ತರಣೆ ವಿಚಾರ ಸಿಎಂ ಗೆ ಬಿಟ್ಟ ವಿಚಾರ. ತುಂಬಾ ಜನ ಸಚಿವ ಸ್ಥಾನದ ಆಕಾಂಕ್ಷಿ ಗಳು ಇದ್ದಾರೆ. ಈಶ್ವರಪ್ಪ ಗೆ ಕ್ಲೀನ್ ಚಿಟ್ ಸಿಕ್ಕಿದೆ. ರಮೇಶ್ ಜಾರಕಿಹೊಳಿಗೆ ಬಿ ರಿಪೋರ್ಟ್ ಕೊಟ್ಟಿದ್ದಾರೆ. ಇವ್ರು ಸ್ವಾಭಾವಿಕವಾಗಿ ಮತ್ತೆ ಸಂಪುಟ ಸೇರುವ ಬಯಕೆ ಇದೆ. ಈ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಸಿಎಂ ಚರ್ಚಿಸಿ ತೀರ್ಮಾನ ಮಾಡ್ತಾರೆ.
ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರ
ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಯಾಗಿಲ್ಲ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಬಗ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪ ನವರು. ಅವರು ನಮ್ಮ ಮಾಸ್ ಲೀಡರ್. ಅವರು 140 ಸ್ಥಾನ ಗೆಲ್ಲಿಸುವ ಬಗ್ಗೆ ಹೇಳಿದ್ದಾರೆ. ಅವ್ರು ಸೂಕ್ತವಾದ ಹೇಳಿಕೆಯನ್ನು ಕೊಟ್ಟಿದ್ದಾರೆ. ಆಮೇಲೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಎಲ್ಲಿ ಸ್ಪರ್ಧೆ ಮಾಡ್ತಾರೆ ಎಂಬುದನ್ನು ತೀರ್ಮಾನ ಮಾಡೋದು ಕೇಂದ್ರ ಚುನಾವಣಾ ಸಮಿತಿ. ನಾವು ಇಲ್ಲಿನ ಅಭಿಪ್ರಾಯ ವನ್ನು ಅಲ್ಲಿಗೆ ಕಳುಹಿಸುತ್ತೇವೆ. ಅಂತಿಮವಾಗಿ ಚುನಾವಣಾ ಸಮಿತಿ ನಿರ್ಧಾರ ಮಾಡಲಿದೆ. ಆ ಮೇಲೆ ಯಡಿಯೂರಪ್ಪ ನವರ ಸಲಹೆಯನ್ನು ಪಕ್ಷ ಪರಿಗಣಿಸಿ, ಮುಂದಿನ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ರು. ಇದನ್ನೂ ಓದಿ :- ಇಂದಿನಿಂದ ಮೂರು ದಿನಗಳ ಕಾಲ ಸಿಎಂ ದೆಹಲಿ ಪ್ರವಾಸ
ಭ್ರಷ್ಟಾಚಾರದ ಪಿತಾಮಹನೇ ಕಾಂಗ್ರೆಸ್
ಭ್ರಷ್ಟಾಚಾರದ ಪಿತಾಮಹನೇ ಕಾಂಗ್ರೆಸ್. ಭ್ರಷ್ಟಾಚಾರದ ಒಂದೇ ನಾಣ್ಯದ ಎರಡು ಮುಖ್ಯ ಎಂಬಂತೆ ಕಾಂಗ್ರೆಸ್ ( congress) ಇದೆ. ಅವರಿಗೆ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಬೀದಿ ನಾಟಕ ಮಾಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು, ಹೋಗುವ ಸಾಲಿನಲ್ಲಿ ಇದ್ದವರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. ಜೈಲಿಗೆ ಹೋಗುವ ಸಾಲಿನಲ್ಲಿ ಯಾರು ಇದ್ದಾರೆ ಎಂಬ ಪ್ರಶ್ನೆ ನನ್ನ ಬಾಯಿಯಲ್ಲಿ ಯಾಕೆ ಹೇಳಿಸುತ್ತೀರಾ. ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಾಗ ಗೊತ್ತಾಗುತ್ತದೆ ಎಂದು ಹೇಳಿದ್ರು.
ಒಕ್ಕಲಿಗ ಸಮುದಾಯದ ಬೆಂಬಲಕ್ಕಾಗಿ ಡಿಕೆಶಿ ಹಾಗೂ ಕುಮಾರಸ್ವಾಮಿ ನಡುವೆ ಫೈಟ್ ವಿಚಾರ
ಒಕ್ಕಲಿಗ ಯಾವತ್ತಿಗೂ ಸಣ್ಣ ಮನಸ್ಥಿತಿಯಲ್ಲಿ ಯೋಚನೆ ಮಾಡುವವನಲ್ಲ. ಒಕ್ಕಲಿಗರು ಸ್ವಾರ್ಥದ, ಭ್ರಷ್ಟಾಚಾರದ ರಾಜಕಾರಣ ಬೆಂಬಲಿಸೋದಿಲ್ಲ. ಒಕ್ಕಲಿಗರಿಗೂ ಗೊತ್ತಿದೆ ಯಾರ ಯಾರ ಯೋಗ್ಯತೆ ಏನು ಅಂತಾ. ನಾವು ನೀತಿಗಾಗಿ ರಾಜಕಾರಣ ಬಳಸೋರು, ಆದರೆ ರಾಜಕಾರಣಕ್ಕೆ ಸಮುದಾಯದ ಹೆಸರನ್ನು ಬಳಸೋದಿಲ್ಲ. ನಾನು ಹುಟ್ಟಿರೋ ಜಾತಿ ಮೇಲೆ ಗೌರವ ಇದೆ. ಉಳಿದ ಜಾತಿಗಳ ಮೇಲೆ ಅಷ್ಟೇ ಗೌರವ ಇದೆ. ನೀತಿ ರಾಜಕಾರಣದಿಂದ ಸಮುದಾಯಕ್ಕೆ ಒಳ್ಳೆಯದೇ ಆಗಿದ್ದೆ ವಿನಹ ಜಾತಿಯ ಹೆಸರಿಂದ ಯಾವುದೇ ಜಾತಿ ಉದ್ದಾರ ಆಗಿಲ್ಲ. ಕೆಲವರಿಗೆ ತಾತ್ಕಾಲಿಕ ವಾಗಿ ಲಾಭ ವಾಗಿ, ಕೊನೆಗೆ ಅವರಿಗೆ ರಿವರ್ಸ್ ಆಗಿದೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ.
ಸಿಟಿ ರವಿ ಸಿದ್ದರಾಮೋತ್ಸವ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ದುರ್ಬಲ ಆಗ್ತಿದ್ದಾರೆ.ಅದಕ್ಕೆ ಉತ್ಸವ ಮಾಡ್ತಿದ್ದಾರೆ. ಕಾಂಗ್ರೆಸ್ ನಲ್ಲೇ ಅವರು ಪ್ರಶ್ನಾತೀತ ನಾಯಕನಾಗಿ ಉಳಿದ್ದಿಲ್ಲ. ನೀವು ನೂರು ವರ್ಷ ಸುಖವಾಗಿರಿ ಆದ್ರೆ ಕಾಂಗ್ರೆಸ್ ಸೋಲಲಿ ಎಂದು ಹಾರೈಸ್ತಿವಿ ಎಂದು ಹೇಳಿದ್ರು.
ಇದನ್ನೂ ಓದಿ :- ಆಂಧ್ರ ಪ್ರದೇಶದಲ್ಲಿ ಅಪಘಾತ – ಬೆಂಗಳೂರಿನ ಇಬ್ಬರು ಪೊಲೀಸ್ ಸಿಬ್ಬಂದಿ, ಚಾಲಕ ಸಾವು