ನಿಗೂಢವಾಗಿ ಸಾವನ್ನಪ್ಪಿದ ರೇಣುಕಾಚಾರ್ಯ ( renukacharya ) ಸಹೋದರನ ಪುತ್ರನ ಸಾವಿನ ತನಿಖೆಯನ್ನ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ( alok kuamar ) ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಕುಟುಂಬದವರು ದೂರು ಕೊಟ್ಟಿದ್ದಾರೆ. ಪೊಲೀಸ್ ತಂಡ, ಎಫ್ ಎಸ್ ಐ ಎಲ್ ( FSIL )ತಂಡ ಬಂದಿದೆ. ಅವರು ಸಾಕ್ಷ್ಯ ಕಲೆ ಹಾಕಲಾಗುತ್ತಿದ್ದಾರೆ. ಊಹಾಪೋಹ ಹೇಳಲು ಸಾಧ್ಯವಿಲ್ಲ. ತನಿಖೆಯಿಂದ ಸತ್ಯಹೊರ ತರುತ್ತೇವೆ. 100 ಕಿಮೀ ಸ್ಪೀಡ್ ನಲ್ಲಿ ಕಾರ್ ಓಡಿರೋದು ಸಿಸಿಟಿವಿಯಿಂದ ಬಹಿರಂಗವಾಗಿದೆ. ಇದನ್ನೂ ಓದಿ : – ಮೈಸೂರಿನಲ್ಲಿ ನಿದ್ದೆಗಡಿಸಿದ್ದ ಭಯಾನಕ ಚಿರತೆ ಕೊನೆಗೂ ಸೆರೆ
ಭಾನುವಾರ 12.06 ನಿಮಿಷಕ್ಕೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕಾರ್ ಕೂಡ ಅದೇ ಸಮಯಕ್ಕೆ ಪಲ್ಟಿಯಾಗಿದೆ. ನ್ಯಾಮತಿ ಬಳಿಯ ಸಿಸಿ ಟಿವಿಯಲ್ಲಿ ಕಾರು ಪತ್ತೆಯಾಗಿದೆ . ಮೃತ ದೇಹ ಸಿಕ್ಕ ಸ್ಥಳಕ್ಕೂ ನ್ಯಾಮತಿಗೂ 10 ಕೀ ಮೀ ಅಂತರವಿದೆ. ಕಾಲ್ ಹಿಸ್ಟರಿ, ಸಿಡಿಆರ್ ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಎಫ್ ಎಸ್ ಐಎಲ್ ಟೀಮ್ ಜೊತೆ ಮಾತನಾಡುತ್ತಿದ್ದೇವೆ. ದಾವಣಗೆರೆ ಎಸ್ಪಿ ರಷ್ಯಂತ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಎರಡ್ಮೂರು ದಿನದಲ್ಲಿ ವರದಿ ಸಿಗಲಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : – ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದ ಆಮ್ ಆದ್ಮಿ ಪಕ್ಷ