ಇಂದು ಧಾರವಾಡ ( DHARAWAD ) ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಮುಂದಿನ ಸಿಎಂ ಎಂಬ ಕೂಗು ಮತ್ತೆ ಕೇಳಿ ಬಂದಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಆಯೋಜನೆ ಮಾಡಿರೋ ಕನಕ ಜಯಂತಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಂಶಿ ಗ್ರಾಮದ ಕರಿ ಸಿದ್ದೇಶ್ಚರ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ದು ಪೂಜೆ ಸಲ್ಲಿಸಿದ್ರು. ಕೋವಿಡ್ ಹಿನ್ನಲೆ ಮಾಸ್ಕ್ ಧರಿಸಿಯೇ ಪೂಜೆ ಸಲ್ಲಿಸಿದ್ರು. ನಂತರ ದೇವಸ್ಥಾನದ ಅರ್ಚಕರಾದ ಕನಕಪ್ಪ ( KANAKAPPA ) ಮನೆಯಲ್ಲಿ ಉಪಹಾರ ಸೇವಿಸಿದ್ರು. ಊಟ ಸೇವಿಸಿ ಹೊರಬರೋವಾಗ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಅವರ ಅಭಿಮಾನಿಗಳು ಘೋಷಣೆ ಕೂಗಿದರು. ಇದನ್ನು ಓದಿ :- BMTC –KSRTC ಬಸ್ಸಿ ನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಕಡ್ಡಾಯ – ಮಾಸ್ಕ್ ಇಲ್ಲ ಅಂದ್ರೆ ನೋ ಎಂಟ್ರಿ
ನಂತರ ಮಾತನಾಡಿದ ಅವರು, ಬಿಜೆಪಿಯವರು ಅವಧಿ ಪೂರ್ವ ಚುನಾವಣೆ ಮಾಡಲ್ಲ. ಅವರಿಗೆ ಹಣ ಬೇಕು. ಬಿಜೆಪಿ ( BJP ) ಯವರಿಗೆ ಅಧಿಕಾರ ಮುಖ್ಯ. ದುಡ್ಡು ಬೇಕು ಅವರಿಗೆ . ಇರುವಷ್ಟು ದಿನ ಎಷ್ಟೋ ಸಾಧ್ಯವೂ ಅಷ್ಟು ದುಡ್ಡು ಮಾಡ್ಕೋತಾರೆ . ಎಲ್ಲದರಲ್ಲೂ ದುಡ್ಡು ಹೊಡೆಯುವ ಕೆಲಸ ನಡೆದಿದೆ. ಅವರು ಯಾಕೆ ಅವಧಿ ಮುನ್ನ ಚುನಾವಣೆ ಮಾಡುತ್ತಾರೆ ಎಂದು ಬಿಜೆಪಿ ವಿರುದ್ದ ವ್ಯಂಗ್ಯವಾಡಿದ್ದಾರೆ.
ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಅಂದು ದೊಡ್ಡ ಮಟ್ಡದ ಹೋರಾಟ ನಡೆಸಲಾಗುತ್ತದೆ. ಮಹದಾಯಿ ಯೋಜನೆ ಕುರಿತು ಬಿಜೆಪಿ ಏನು ಮಾಡಲಿಲ್ಲ. ಬಜೆಟ್ ನಲ್ಲಿ ಅಷ್ಟು ತೆಗದು ಇಟ್ಟಿದ್ದೀವಿ ಅಂತಾ ಹೇಳುತ್ತಾರೆ. ಆದರೆ ನಯಾ ಪೈಸೆ ಕೆಲಸ ಆಗಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ. ಬಸವರಾಜ ಬೊಮ್ಮಾಯಿ ( BASAVARAJ BOMMAI ) ಸಹ ಉತ್ತರ ಕರ್ನಾಟಕದವರು ಏನು ಮಾಡಿದರು..? ಯಡಿಯೂರಪ್ಪ ಸಹ ಸಿಎಂ ಇದ್ದಾಗ ಏನು ಮಾಡಿದರು..? ಎಂದು ಪ್ರಶ್ನೆ ಮಾಡಿದ್ರು. ಮುಂದಿನ ವಾರ ಅಧಿವೇಶನದಲ್ಲಿ ಜಾನುವಾರುಗಳಿಗೆ ತಗುಲಿದ ಚರ್ಮ ರೋಗ ಕುರಿತು ಚರ್ಚೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ ಈ ಚರ್ಮ ರೋಗ. ಅಧಿವೇಶನದಲ್ಲಿ ಹೆಚ್ಚು ಮಹತ್ವ ಅದಕ್ಕೆ ಕೊಡುತ್ತೇವೆ ಎಂದು ತಿಳಿಸಿದ್ರು.
ಇದನ್ನು ಓದಿ :- ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿ …!