ನೀವು ಬಿಜೆಪಿಗೆ ಓಟ್ ನೀಡಿದ್ರೆ ದೇಶದಲ್ಲಿ ಪರಿವರ್ತನೆ ಆಗುತ್ತೆ. ಒಂದು ಕಾಲದಲ್ಲಿ ಸಾಲ ಕೇಳುವ, ಬೇಡುವ ರಾಷ್ಟ್ರವಾಗಿತ್ತು ಭಾರತ. ಇಂದು ಸಾಲ ಕೊಡುವ ರಾಷ್ಟ್ರವಾಗಿದೆ ಎಂದು ತುಮಕೂರಿನ ಕೊರಟಗೆರೆ ಜನಸಂಕಲ್ಪ ಯಾತ್ರೆಯಲ್ಲಿ ಸಚಿವ ಆರಗ ಜ್ಞಾನೇಂದ್ರ ( ARAGA JENEEDRA ) ಹೇಳಿದ್ದಾರೆ.
Live : ಜನಸಂಕಲ್ಪ ಯಾತ್ರೆ – ಕುಣಿಗಲ್, ತುಮಕೂರು ಜಿಲ್ಲೆ #JanaSankalpaYatre https://t.co/qxP28F4px4
— BJP Karnataka (@BJP4Karnataka) December 7, 2022
ನಮ್ಮ ದೇಶ ನರೇಂದ್ರ ಮೋದಿ ( NAREDNRA MODI ) ಅವರ ನಾಯಕತ್ವದಲ್ಲಿ ಅಭಿವೃದ್ದಿಯಾಗಿದೆ. ಕಾಂಗ್ರೆಸ್ ನವರು ದಲಿತರನ್ನ ಭಿಕ್ಷುಕರನ್ನಾಗಿ ಮಾಡಿದ್ದಾರೆ. ದಲಿತರನ್ನ ಮನುಷ್ಯರು ಅಂತಾ ಪರಿಗಣಿಸಲಿಲ್ಲ. ಅಂಬೇಡ್ಕರ್ ಅವರನ್ನ ಹಠ ತೊಟ್ಟು ಕಾಂಗ್ರೆಸ್ ನವರು ಸೋಲಿಸಿದ್ರು. ಅಂಬೇಡ್ಕರ್ ಅವರ ಶವ ಹೂಳಲು ದೆಹಲಿಯಲ್ಲಿ ಕಾಂಗ್ರೆಸ್ ಜಾಗ ಕೊಡಲಿಲ್ಲ. ಚುನಾವಣೆ ಬಂದಾಗ ಕಾಂಗ್ರೆಸ್ 500 ನೋಟು ಹಿಡಿದು ಬರಬಹುದು. ಕೊರಟಗೆರೆಯಲ್ಲಿ ಎಂದಿಗೂ ಬಿಜೆಪಿ ಗೆದ್ದಿಲ್ಲ ಎಂದು ಹೇಳಿದ್ರು ಇಂದಿನ ಜನ ನೋಡಿದ್ರೆ ಯಾವುದೇ ಅಭ್ಯರ್ಥಿ ನಿಂತರು ಬಿಜೆಪಿಯೇ ಗೆಲ್ಲೋದು. ಬಿಜೆಪಿಗೆ ಮುದ್ದಹನುಮೇಗೌಡರು ಬಂದಿರೋದು ಆನೆ ಬಲ ಬಂದಂತಾಗಿದೆ. ಈ ದೇಶಕ್ಕಾಗಿ, ಸಿದ್ದಾಂತಕ್ಕಾಗಿ ಬಿಜೆಪಿ ಗೆಲ್ಲಬೇಕು. ಈ ಸಾರಿ ಕೊರಟಗೆರೆಯಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ಹೇಳಿದ್ರು. ಇದನ್ನು ಓದಿ : – ಕೊರಟಗೆರೆಯಲ್ಲಿ ಕಾಂಗ್ರೆಸ್ ನವರೇ ಕಾಂಗ್ರೆಸ್ ಸೋಲಿಸ್ತಾರೆ – ಸಿಎಂ ಬೊಮ್ಮಾಯಿ
Live : ಜನಸಂಕಲ್ಪ ಯಾತ್ರೆ – ಕೊರಟಗೆರೆ, ತುಮಕೂರು ಜಿಲ್ಲೆ #JanaSankalpaYatre https://t.co/APVqLVJKDI
— BJP Karnataka (@BJP4Karnataka) December 7, 2022
ಇನ್ನೂ ಇದೆ ವೇಳೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ ( GOVINDA KARAJOLA ) ಕಾಂಗ್ರೆಸ್ ಆಡಳಿತದಿಂದ ದೀನ ದಲಿತರ ಕಲ್ಯಾಣ ಆಗಲಿಲ್ಲ. ಬಡವರ ಪರವಾಗಿ ಎಂದಿಗೂ ಕಾಂಗ್ರೆಸ್ ಕಳಕಳಿಯಾಗಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಅವರ ಆಡಳಿತ ಶಾಪ ಹೊರತು ವರ ಆಗಲಿಲ್ಲ. ಅಂಬೇಡ್ಕರ್ ಅವರನ್ನ ಹೀನಾಯವಾಗಿ ಸೋಲಿಸಿ ಅನ್ಯಾಯ ಮಾಡಿದ್ರು. ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ಕಳಕಳಿಯ ಹಿನ್ನೆಲೆಯಿಂದ ಬಂದವರು. 11,133 ಜನ ಪೌರ ಕಾರ್ಮಿಕರನ್ನ ಸರ್ಕಾರಿ ನೌಕರರು ಅಂತಾ ನೇಮಕಾತಿ ಮಾಡಿದ್ದಾರೆ. 15 ರಿಂದ 17 % ಎಸ್ಸಿ ಜನಾಂಗಕ್ಕೆ 3 ರಿಂದ 7 % ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ. ಇಂದು ಕಾಂಗ್ರೆಸ್ ಹೊಸ ನಾಟಕ ಪ್ರಯೋಗ ಮಾಡ್ತಿದ್ದಾರೆ. ರಾಹುಲ್ ನ ಕರೆದುಕೊಂಡು ಬಂದು ಭಾರತ್ ಜೋಡೋ ಮಾಡ್ತಿದ್ದಾರೆ. ದಲಿತರ ಓಟ್ ಬ್ಯಾಂಕ್ ಗಾಗಿ ಸುಳ್ಳು ಆರೋಪ ಮಾಡ್ತಿದ್ದಾರೆ. ಅದೆಲ್ಲವೂ ಸತ್ಯಕ್ಕೆ ದೂರ ಅನ್ನೋದು ನೀವ್ ಅರ್ಥ ಮಾಡ್ಕೋಬೇಕು. ನಮ್ಮೆಲ್ಲ ಜನಾಂಗಗಳು ಓಟ್ ಹಾಕೋದು ಕೈ ಬಿಟ್ಟಿದ್ದಕ್ಕೆ ಇಂದು ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ : – ರಾಜಕೀಯ ಬಿಟ್ಟು ಕೂಲಿ ಮಾಡ್ತೀನಿ – ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರೋ ಮಾತೆ ಇಲ್ಲ – ಮುನಿರತ್ನ