ರೌಡಿಗಳನ್ನು ಈ ದೇಶಕ್ಕೆ ಪರಿಚಯ ಮಾಡಿದ್ದೇ ಕಾಂಗ್ರೆಸ್ – ಡಾ.ಕೆ ಸುಧಾಕರ್

ಬಿಜೆಪಿಯಲ್ಲಿ ರೌಡಿಗಳಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ಡಾ.ಕೆ ಸುಧಾಕರ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ( BJP ) ಯಲ್ಲಿ ರೌಡಿಗಳಿದ್ದಾರೆ ಎಂಬ ಕಾಂಗ್ರೆಸ್ ( CONGRESS ) ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ಡಾ.ಕೆ ಸುಧಾಕರ್ ( SUDHAKAR ) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೌಡಿಗಳನ್ನು ಈ ದೇಶಕ್ಕೆ ಪರಿಚಯ ಮಾಡಿದ್ದೇ ಕಾಂಗ್ರೆಸ್ ಪಕ್ಷ. ಫೈಟರ್ ರವಿ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಅಂತ ಗೊತ್ತಿಲ್ಲ ಎಂದು ಹೇಳಿದ್ರು.

ಮತ್ತೊಬ್ಬ ರೌಡಿಶೀಟರ್​ ಬಿಜೆಪಿ ಸೇರ್ಪಡೆ, ಸೈಲೆಂಟ್​ ಸುನೀಲ ಬಳಿಕ ಕಮಲ ಹಿಡಿದ ಫೈಟರ್​ ರವಿ  | Rowdy sheeter fighter ravi joined bjp today pvn– News18 Kannada
ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯ ಅಬ್ಬರ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ರಾಜ್ಯದ ಜನ ಎರಡು ಬಾರಿ ಆಡಳಿತ ಕೊಟ್ಟಿದ್ರು. ಸಾಂದರ್ಭಿಕವಾಗಿ 2 ಸಲ ಅವರು ಆಡಳಿತ ನಡೆಸಿದ್ದಾರೆ. ಆಗ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ನೆನಪಿಗೆ ಬರಲಿಲ್ಲ. ಯಾವ ಪುರುಷಾರ್ಥಕ್ಕೆ ಈಗ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ..? ಒಂದೇ ಒಂದು ಯೋಜನೆ ಚಿಕ್ಕಬಳ್ಳಾಪುರಕ್ಕೆ ಅವರು ಕೊಟ್ಟಿದ್ರೆ ಹೇಳಲಿ ನೋಡೋಣ..? ರಾಮನಗರ ( RAMANAGARA ) ಜಿಲ್ಲೆ ಮಾಡುವ ಭರದಲ್ಲಿ ಚಿಕ್ಕಬಳ್ಳಾಪುರವನ್ನೂ ಮಾಡಿದ್ರು. ಇದನ್ನೂ ಓದಿ : –  ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆ ಅವಕಾಶವಿಲ್ಲ- ನಳಿನ್‍ಕುಮಾರ್ ಕಟೀಲ್ ಸ್ಪಷ್ಟನೆ

ಚಿಕ್ಕಬಳ್ಳಾಪುರ ( CHIKKABALLAPURA )ಕ್ಕೆ ಅವರ ಕೊಡುಗೆ ಏನು..? ಇದರ ಬಗ್ಗೆ ನಾನು ಬಹಿರಂಗ ಚಾಲೆಂಜ್ ಹಾಕ್ತೀನಿ . ಬಾಯಿಗೆ ಬಂದಂಗೆ ಚಿಕ್ಕಬಳ್ಳಾಪುರದಲ್ಲಿ ಅವರು ಮಾತಾಡಿ ಬಂದಿದ್ದಾರೆ. ವಯಸ್ಸಿಗೆ ಬೆಲೆ ಕೊಟ್ಟಿ ನಾನು ಸುಮ್ನೆ ಇದೀನಿ. ನಾನು ಮಾತಾಡುತ್ತಿದ್ದಿದ್ರೆ ನೂರು ಮಾತಾಡಬಹುದಿತ್ತು. ಉತ್ತಮ ಚಾರಿತ್ರ್ಯ ಇರೋರು ನಮ್ಮ ಪಕ್ಷಕ್ಕೆ ಬರ್ತಿದ್ದಾರೆ. ಹಳೇ ಮೈಸೂರು ಭಾಗ, ಕಲ್ಯಾಣ ಕರ್ನಾಟಕ, ಮಧ್ಯ ಮತ್ತು ಕಿತ್ತೂರು ಕರ್ನಾಟಕದಿಂದ ಉತ್ತಮ ನಾಯಕರು ಬರ್ತಿದ್ದಾರೆ. ಕಾಂಗ್ರೆಸ್ ನವರಿಗೆ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.

ಇದನ್ನೂ ಓದಿ : – ವ್ಯಾಪಾರ ದಂಗಲ್ ನಡುವೆ ಸುಬ್ರಹ್ಮಣ್ಯ ರಜತ ರಥೋತ್ಸವಕ್ಕೆ ಕ್ಷಣಗಣನೆ….

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!