ದಕ್ಷಿಣ ಭಾರತದಲ್ಲಿ ಕೆಂಪೇಗೌಡ ಪುತ್ಥಳಿ (Kempegowda statue) ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗುತ್ತಿದೆ. ಕೆಂಪೇಗೌಡ ಥೀಮ್ ಪಾರ್ಕ್ ನಲ್ಲಿ ಎಲ್ಲೆಡೆ ಸಂಗ್ರಹ ಮಾಡಲಾಗುತ್ತಿರುವ ಮಣ್ಣನ್ನ ಹಾಕಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ (R.Ashok) ಹೇಳಿದ್ದಾರೆ.
ಕೋಲಾರ (Kolar) ದಲ್ಲಿ ಮಾತನಾಡಿದ ಅವರು ಕೆಂಪೇಗೌಡ ಹೆಸರಲ್ಲಿ ರಾಜಕೀಯ, ಅವರ ಹೆಸರಲ್ಲೇ ಸರ್ಕಾರ ಮಾಡಿದೋರು ತುಂಬಾ ಜನ ಇದ್ದಾರೆ. ಕೆಂಪೇಗೌಡ ಬೆಂಗಳೂರು ಕಟ್ಟಿದಾಗ ಎಲ್ಲಾ ಜಾತಿ ಜನಾಂಗದ ಪೇಟೆಗಳನ್ನ ಕಟ್ಟಿದ್ದಾರೆ ಎಂದು ಹೇಳಿದ್ರು.
ಇದೇ ವೇಳೆ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್ (Dk. Shivkumar) ಉತ್ತರ ಮತ್ತು ದಕ್ಷಿಣದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಅವರಿಬ್ಬರು ಉತ್ತರ ದಕ್ಷಿಣ ಎನ್ನುತ್ತಿದ್ದಾರೆ. ಜೋಡೋ ಯಾತ್ರೆ ಓಡೋ ಯಾತ್ರೆಯಾಗಿದೆ ಎಂದು ವ್ಯಂಗ್ಯವಾಡಿದ್ರು. ಅದರಿಂದ ಅವರಿಗೆ ಮರ್ಯಾದೆ ಹೋಯ್ತೆ ಹೊರತು ಲಾಭ ಇಲ್ಲ. ಕಾಂಗ್ರೆಸ್ ಪಾದಯಾತ್ರೆಗಳು ಅವರು ಅಸ್ತಿತ್ವ ಉಳಿಸಿಕೊಳ್ಳಲು ಮಾತ್ರ. ಪಾದಯಾತ್ರೆಗಳು ಮಾಡುವುದರಿಂದ ಯಾರಿಗೆ ಯಾವುದೇ ಲಾಭ ಇಲ್ಲ. ಜೋಡೋ ಮಾಡಿದವರೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನ ಮುಚ್ಚಿ ತೋಡೋ ಮಾಡುತ್ತಿದ್ದಾರೆ. ಅವರದೆ ಸರ್ಕಾರ ಇದ್ದಾಗ ಭಾಗ್ಯಗಳು ಕೊಟ್ಟವರು 120 ರಿಂದ 70 ಕ್ಕೆ ಯಾಕೆ ಇಳಿದ್ರು ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ :- ತಮಿಳಿನ ಸೂಪರ್ ಸ್ಟಾರ್ ನಟಿ ನಯ ನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ
ಖರ್ಗೆ ಎಐಸಿಸಿ ಅಧ್ಯಕ್ಷರಾದ ವಿಚಾರ
ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಗೆಲ್ಲೊಕಾಗಿಲ್ಲ, ಅವರ ಆಯ್ಕೆಯಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರಲ್ಲ. ರಿಮೋಟ್ ಆಗಿ ಮಲ್ಲಿಕಾರ್ಜುನ ಖರ್ಗೆ ಕೆಲಸ ಮಾಡ್ತಾರೆ. ಕಾಂಗ್ರೆಸ್ ನಲ್ಲಿ ಕೆಲವರು ನೆಲೆ ಇಲ್ಲದೆ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಬಾದಾಮಿ, ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ್ರು.
ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ, ನಮ್ಮ ಪಕ್ಷ ಹಿಂದುತ್ವ ಆಧಾರದ ಮೇಲೆ ಅಧಿಕಾರಕ್ಕೆ ಬರುತ್ತೆ ಎಂದು ತಿಳಿಸಿದರು. ಒಕ್ಕಲಿಗರು ಸಿಎಂ ಆಗಬೇಕು ಎನ್ನುವ ನಂಜಾವದೂತ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಒಕ್ಕಲಿಗ ಮೀಸಲಾತಿ ವಿಚಾರವಾಗಿ ಸ್ವಾಮೀಜಿಯವರ ಜೊತೆ ಮಾತನಾಡಿದ್ದೇನೆ. ನನಗೆ ಅಂತಹ ಯಾವುದೇ ಆಸೆ ಇಲ್ಲ, ಈಗಾಗಲೇ ಸಿಎಂ ಎಂದುಕೊಂಡವರು ಏನಾಗುತ್ತೆ ಎಂದು ನಮಗೆ ಗೊತ್ತಿದೆ. ಸಿಎಂ ಬೊಮ್ಮಾಯಿಯವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ, ಅವರ ಪಕ್ಷಕ್ಕೆ ಎರಡಂಕಿ ಸೀಟು ಸಿಗಲ್ಲ ಎಂದು ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ :- TRS BREAKING – ತೆಲಂಗಾಣದಲ್ಲಿ TRS ಶಾಸಕರ ಖರೀದಿಗೆ ಯತ್ನ- 15 ಕೋಟಿ ಜೊತೆ ನಾಲ್ವರು ವಶಕ್ಕೆ